ಬೆಳ್ತಂಗಡಿ: ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ ಇದರ 2026 -27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಜು.12 ರಂದು ಸಂಘದ ಕಟ್ಟಡದಲ್ಲಿ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಗಣೇಶ್ ಆಚಾರ್ಯ ಗುಂಪಲಾಜೆ , ಉಪಾಧ್ಯಕ್ಷರುಗಳಾಗಿ ವಿಲ್ಸನ್ ನೆಲ್ಸನ್ ಮೋನಿಸ್ ಗುಂಪಲಾಜೆ ಹಾಗೂ ಪ್ರೇಮನಾಥ್ ಶೆಟ್ಟಿ ಗುಂಪಲಾಜೆ, ಕಾರ್ಯದರ್ಶಿಯಾಗಿ ರಾಜೇಶ್ ಅದೇಲು, ಜೊತೆ ಕಾರ್ಯದರ್ಶಿಯಾಗಿ ವಿಘ್ನೇಶ್ ಗಾಣಿಗ ಸಿರಿಮಜಲು, ಕ್ರೀಡಾ ಕಾರ್ಯದರ್ಶಿಯಾಗಿ ಸಂದೀಪ್ ಆದೇಲು ಹಾಗೂ ಸುಪ್ರೀತ್ ಆದೇಲು, ಕೋಶಾಧಿಕಾರಿಯಾಗಿ ಪ್ರಶಾಂತ್ ಆಚಾರ್ಯ ಸಿರಿಮಜಲು, ಸಾಂಸ್ಕೃತಿಕ ನಿರ್ದೇಶಕರಾಗಿ ಜಗನ್ನಾಥ್ ಕುಲಾಲ್ ಸಿರಿಮಜಲು ಹಾಗೂ ಸಮನ್ವಿತ್ ಪಣೆಜಾಲು ಇವರುಗಳು ಆಯ್ಕೆಯಾಗಿರುತ್ತಾರೆ.
ಕಾರ್ಯಕ್ರಮದಲ್ಲಿ ಸಲಹೆಗಾರರಾದ ಯತೀಶ್ ಸಿರಿಮಜಲುರವರು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಹಾಗೂ ಜಗನ್ನಾಥ ರವರು ಮೂರು ವರ್ಷಗಳ ಅಧ್ಯಕ್ಷ ಎಂಬ ಜವಾಬ್ದಾರಿ ಸ್ಥಾನದಿಂದ ನಿರ್ಗಮಿಸಿದ ನಾಗೇಶ್ ಆದೇಲುರವರ ಸೇವೆಯನ್ನು ಕೊಂಡಾಡಿದರು. ಮುಂದೆಯೂ ಈ ಮಾದರಿಯನ್ನು ಅನುಸರಿಸಲು ಸೂಚನೆ ನೀಡಿದರು. ನಿರ್ಗಮಿತ ಅಧ್ಯಕ್ಷ ನಾಗೇಶ್ ಈ ವರೆಗೆ ತಮಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಶಾಂತರಾಜ್ ಜೈನ್, ಶಂಕರ ಗಾಣಿಗ ಸೇರಿದಂತೆ ಹಿರಿಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ನೂತನ ಕಾರ್ಯದರ್ಶಿ ರಾಜೇಶ್ ಆದೇಲು ಧನ್ಯವಾದವಿತ್ತರು.
















