ಉಜಿರೆ : NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ನಲ್ಲಿ ವಿನೂತನ ಮಾದರಿಯ ನವೀಕೃತಗೊಂಡ ಆರೋಗ್ಯ ವಿಮಾ ಯೋಜನೆಗೆ ಸಂಬಂಧಿಸಿಂದ ವಿಭಾಗವನ್ನು ಜನಾರ್ಧನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡವೆಟ್ನಾಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ಮಾತನಾಡುತ್ತ ಇತ್ತೀಚಿನ ದಿನಗಳಲ್ಲಿ ಆರೋಗ್ಯ ವಿಮೆಯನ್ನು ಪ್ರತಿಯೊಬ್ಬರು ಹೊಂದಿರಬೇಕು . ಆರೋಗ್ಯ ಹಾಳಾಗಲಿ ಎಂದು ವಿಮೆ ಮಾಡಿಸುವುದಲ್ಲ, ಅಯಾಚಿತವಾಗಿ ಆರೋಗ್ಯ ಹದಗೆಟ್ಟಾಗ ಊರುಗೋಲಾಗಿ ಆರೋಗ್ಯ ವಿಮೆ ನಮ್ಮ ಸಹಾಯಕ್ಕೆ ಅನೂಕೂಲವಾಗುತ್ತದೆ, ಉಜಿರೆಯಂತ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಆರೋಗ್ಯ ಸೌಲಭ್ಯ ನೀಡುತ್ತಿರುವ ಬೆನಕ ಹೆಲ್ತ್ ಸೆಂಟರ್ ನ ಕಾರ್ಯವೈಖರಿ ಶ್ಲಾಘನೀಯ . ಅತ್ಯಂತ ಸುಂದರವಾಗಿ ಮತ್ತು ನವೀನ ಮಾದರಿಯಲ್ಲಿ ವಿಮಾ ವಿಭಾಗ ಸ್ಥಳಾಂತರಗೊಂಡಿದ್ದು , ಡಾ.ಗೋಪಾಲಕೃಷ್ಣ ಅವರ ಸೃಜನಶೀಲತೆ ಮತ್ತು ಉತ್ಸುಕತೆ ನಿಜಕ್ಕೂ ಪ್ರಶಂಶನೀಯವೆಂದು ಮೆಚ್ಚುಗೆಯ ನುಡಿಗಳನ್ನಾಡಿ ಶುಭ ಹಾರೈಸಿದರು .
ಡಾ.ಗೋಪಾಲಕೃಷ್ಣ ಮತ್ತು ಡಾ.ಭಾರತಿ ದಂಪತಿಗಳು , ಶರತ್ ಕೃಷ್ಣ ಪಡವೆಟ್ನಾಯರನ್ನು ಶಾಲು ಹೊದಿಸಿ, ಹೂಗುಚ್ಛ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಸೀತಾರಾಮ್ ಭಟ್ ಕೆ , ಡಾ.ಭಾರತಿ ಜಿ ಕೆ , ಡಾ.ಆದಿತ್ಯ ರಾವ್ , ಡಾ.ಅಂಕಿತ ಜಿ ಭಟ್ , ಡಾ.ರೋಹಿತ್ ಜಿ ಭಟ್ , ಡಾ.ನವ್ಯ ಭಟ್, ಡಾ.ಶ್ರೇಯಸ್ ಮತ್ತು ಬೆನಕ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.















