July 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಬೆನಕ ಹೆಲ್ತ್ ಸೆಂಟರ್ ನಲ್ಲಿ ನವೀಕೃತಗೊಂಡ ಆರೋಗ್ಯ ವಿಮಾ ಯೋಜನೆಯ ವಿಭಾಗ ಲೋಕಾರ್ಪಣೆ     

ಉಜಿರೆ : NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ನಲ್ಲಿ  ವಿನೂತನ ಮಾದರಿಯ ನವೀಕೃತಗೊಂಡ  ಆರೋಗ್ಯ ವಿಮಾ ಯೋಜನೆಗೆ ಸಂಬಂಧಿಸಿಂದ ವಿಭಾಗವನ್ನು ಜನಾರ್ಧನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ   ಶರತ್ ಕೃಷ್ಣ ಪಡವೆಟ್ನಾಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು .

ಈ ಸಂದರ್ಭದಲ್ಲಿ  ಮಾತನಾಡುತ್ತ ಇತ್ತೀಚಿನ ದಿನಗಳಲ್ಲಿ ಆರೋಗ್ಯ ವಿಮೆಯನ್ನು ಪ್ರತಿಯೊಬ್ಬರು ಹೊಂದಿರಬೇಕು . ಆರೋಗ್ಯ ಹಾಳಾಗಲಿ ಎಂದು ವಿಮೆ ಮಾಡಿಸುವುದಲ್ಲ, ಅಯಾಚಿತವಾಗಿ  ಆರೋಗ್ಯ ಹದಗೆಟ್ಟಾಗ ಊರುಗೋಲಾಗಿ ಆರೋಗ್ಯ ವಿಮೆ ನಮ್ಮ ಸಹಾಯಕ್ಕೆ ಅನೂಕೂಲವಾಗುತ್ತದೆ, ಉಜಿರೆಯಂತ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಆರೋಗ್ಯ ಸೌಲಭ್ಯ ನೀಡುತ್ತಿರುವ  ಬೆನಕ ಹೆಲ್ತ್ ಸೆಂಟರ್ ನ ಕಾರ್ಯವೈಖರಿ ಶ್ಲಾಘನೀಯ . ಅತ್ಯಂತ ಸುಂದರವಾಗಿ  ಮತ್ತು ನವೀನ ಮಾದರಿಯಲ್ಲಿ ವಿಮಾ ವಿಭಾಗ ಸ್ಥಳಾಂತರಗೊಂಡಿದ್ದು , ಡಾ.ಗೋಪಾಲಕೃಷ್ಣ ಅವರ ಸೃಜನಶೀಲತೆ ಮತ್ತು ಉತ್ಸುಕತೆ ನಿಜಕ್ಕೂ ಪ್ರಶಂಶನೀಯವೆಂದು ಮೆಚ್ಚುಗೆಯ ನುಡಿಗಳನ್ನಾಡಿ ಶುಭ ಹಾರೈಸಿದರು .

ಡಾ.ಗೋಪಾಲಕೃಷ್ಣ ಮತ್ತು ಡಾ.ಭಾರತಿ ದಂಪತಿಗಳು , ಶರತ್ ಕೃಷ್ಣ  ಪಡವೆಟ್ನಾಯರನ್ನು ಶಾಲು ಹೊದಿಸಿ, ಹೂಗುಚ್ಛ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಸೀತಾರಾಮ್  ಭಟ್ ಕೆ , ಡಾ.ಭಾರತಿ ಜಿ ಕೆ , ಡಾ.ಆದಿತ್ಯ ರಾವ್ , ಡಾ.ಅಂಕಿತ ಜಿ ಭಟ್ , ಡಾ.ರೋಹಿತ್ ಜಿ ಭಟ್ , ಡಾ.ನವ್ಯ ಭಟ್, ಡಾ.ಶ್ರೇಯಸ್ ಮತ್ತು ಬೆನಕ ಆಸ್ಪತ್ರೆಯ  ಸಿಬ್ಬಂದಿಗಳು ಉಪಸ್ಥಿತರಿದ್ದರು.      

Related posts

ಹೊಸಪಟ್ಣ ಸ.ಕಿ.ಪ್ರಾ. ಶಾಲೆಯಲ್ಲಿ ಪರಿಸರ ದಿನಾಚರಣೆ

Suddi Udaya

ಮಾಜಿ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್ ವಿಧಿವಶ

Suddi Udaya

ಗೇರುಕಟ್ಟೆಯಲ್ಲಿ ವಿಶ್ವ ಅಗ್ನಿಹೋತ್ರ ದಿನದ ಆಚರಣೆ

Suddi Udaya

ವೀಲ್ ಚಯರ್ ನಲ್ಲಿ ಬಂದು 88 ವರ್ಷದ ಅಜ್ಜಿ ಗಂಗಮ್ಮ ಹೆಗ್ಡೆಯವರಿಂದ ಮತದಾನ

Suddi Udaya

ರೋಟರಿ ಕ್ಲಬ್ ವಲಯ ಮಟ್ಟದ ಕ್ರಿಕೆಟ್ ಸ್ಪರ್ಧೆ

Suddi Udaya

ಬೆಳ್ತಂಗಡಿ : ಹುಣ್ಸೆಕಟ್ಟೆ ಕ್ರಾಸ್ ಗೇರುಕಟ್ಟೆ ಪರಪ್ಪು, ಕೊಯ್ಯೂರು ಸರ್ಕಾರಿ ಬಸ್ ಸಂಚಾರ ಪ್ರಾರಂಭ

Suddi Udaya
error: Content is protected !!