ಬೆಳ್ತಂಗಡಿ: ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್ಡಿಟಿಯು) ಗುರುವಾಯನಕೆರೆ ಘಟಕದ ವಿಶೇಷ ಸಭೆ ಜು.13 ರಂದು ನಡೆಯಿತು.
ವೀಕ್ಷಕರಾಗಿ ಎಸ್ಡಿಟಿಯು ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಪಿಲಿಫ್ ಹೆನ್ರಿ ಡಿಸೋಜ, ಜಿಲ್ಲಾ ಕಾರ್ಯದರ್ಶಿ ಫಝಲ್ ಉಜಿರೆ ಉಪಸ್ಥಿತರಿದ್ದರು.
ಸಭೆಯಲ್ಲಿ ತಾಲೂಕು ಪದಗ್ರಹಣ ಕಾರ್ಯಕ್ರಮ, ಸದಸ್ಯತ್ವ ಅಭಿಯಾನದ ಬಗ್ಗೆ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಎಸ್ಡಿಟಿಯು ಆಟೋ ಯೂನಿಯನ್ ಗುರುವಾಯನಕೆರೆ ಘಟಕದ 2026 – 29 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹೈದರ್, ಉಪಾಧ್ಯಕ್ಷರಾಗಿ ತಾಲಿಬ್, ಕಾರ್ಯದರ್ಶಿಯಾಗಿ ಅಶ್ರಫ್ ಕೆ.ಪಿ, ಜೊತೆ ಕಾರ್ಯದರ್ಶಿಯಾಗಿ ಅಝೀಝ್, ಕೋಶಾಧಿಕಾರಿಯಾಗಿ ಸಿರಾಜ್ ಜಿ.ಕೆ ಇವರನ್ನು ಆಯ್ಕೆಮಾಡಲಾಯಿತು. ಉಳಿದಂತೆ 11 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನೂ ಆಯ್ಕೆ ಮಾಡಲಾಯಿತು. ಅಝೀಝ್ ಸ್ವಾಗತಿಸಿ, ವಂದಿಸಿದರು.















