ಬೆಳ್ತಂಗಡಿ : ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಯಶಸ್ವಿನಿ ಹಾಗೂ ನಿಕೇತ್ ರವರು ಎನ್.ಸಿ.ಸಿ ಯ ಆರ್ಮಿ ವಿಭಾಗದ ರೈಫಲ್ ಫೈಯರಿಂಗ್ ಸ್ಪರ್ಧೆಯು NITK ಸುರತ್ಕಲ್ ನಲ್ಲಿ ನಡೆದು
0.22 ರೈಫಲ್ ಫೈರಿಂಗ್ ವಿಭಾಗದಲ್ಲಿ ಬಳ್ಳಾರಿಯ ತೋರಂಗಲ್ಲಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಇವರ ಈ ವಿಶೇಷ ಸಾಧನೆಗೆ ಮಾರ್ಗದರ್ಶನ ತರಬೇತಿ ನೀಡಿದ ಸಂಸ್ಥೆಯ ಎನ್.ಸಿಸಿ ಅಧಿಕಾರಿ ನಿರಂಜನ್ ಜೈನ್ ಐ ಇವರಿಗೆ ಮತ್ತು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಉಪ ಪ್ರಾಂಶುಪಾಲರಾದ ಗಣೇಶ ಬಿ ಅಭಿನಂದಿಸಿದ್ದಾರೆ.















