25.7 C
ಪುತ್ತೂರು, ಬೆಳ್ತಂಗಡಿ
August 31, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

ಬೆಳ್ತಂಗಡಿ: ತಾಲೂಕಿನಲ್ಲಿ ಎರಡು ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತಣ್ಣೀರುಪಂತದ ಕೊಡಂಗೆ ಮತ್ತು ತೆಕ್ಕಾರಿನ ಬಾಜಾರು ಅಂಗನವಾಡಿ ಕಾರ್ಯಕರ್ತೆ ಹುದ್ದೆ ಹಾಗೂ ಬಾರ್ಯದ ಪೆರಿಯೊಟ್ಟು, ಕೊಕ್ಕಡದ ಹಳ್ಳಿಂಗೇರಿ, ಉಜಿರೆಯ ಅತ್ತಾಜೆ, ಕೊಯ್ಯೂರಿನ ಬಜಿಲ, ಮಲವಂತಿಗೆಯ ಎಳನೀರು ಮತ್ತು ಗುತ್ಯಡ್ಕ, ನೆರಿಯದ ಬಾಂಜಾರುಮಲೆ, ಬೆಳಾಲಿನ ಕೊಲ್ಪಾಡಿ, ಕೊಯ್ಯೂರಿನ ಪೆರ್ಮುದೆ ಕೊಪ್ಪದಬೈಲ್, ಚಿಬಿದ್ರೆಯ ಕಲ್ಲಗುಂಡ, ಇಂದಬೆಟ್ಟಿನ ಇಂದಬೆಟ್ಟು, ಕೊಕ್ಕಡದ ಸೌತಡ್ಕ, ಬೆಳಾಲಿನ ದೊಂಪದಪಲ್ಕೆ ಬಿ ಇಲ್ಲಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ನೆರಿಯ ಬಾಂಜಾರುಮಲೆ ಪ.ಪಂಕ್ಕೆ ಮೀಸಲಾಗಿದ್ದು, ಉಳಿದ ಎಲ್ಲಾ ಹುದ್ದೆಗಳು ಸಾಮಾನ್ಯರಿಗೆ ನೀಡಲಾಗಿದೆ.

ಅಂಗನವಾಡಿ ಕಾರ್ಯಕರ್ತೆಗೆ ಪಿಯುಸಿ, ಸಹಾಯಕಿ ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ವಯಸ್ಸು 19ರಿಂದ 35 ವರ್ಷ, ಅರ್ಜಿ ಸಲ್ಲಿಸಲು ಆ.10 ಕೊನೆಯ ದಿನವಾಗಿದೆ. ಅರ್ಜಿ ಫಾರಂಗಳನ್ನು ಶಿಶುಅಭಿವೃದ್ಧಿ ಯೋಜನಾ ಕಚೇರಿಯಿಂದ ಪಡೆದು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ೦೮೨೫೬-೨೯೫೧೩೪ನ್ನು ಸಂಪರ್ಕಿಸಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಕೊಯ್ಯೂರು ಪ.ಪೂ. ಕಾಲೇಜಿಗೆ ಶೇ. 83.87 ಫಲಿತಾಂಶ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

Suddi Udaya

ಬಿಷಪ್ ಲಾರೆನ್ಸ್ ಮುಕ್ಕುಯಿರವರಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಗೌರವಾಭಿನಂದನೆ

Suddi Udaya

ಉಜಿರೆ: ಕೋಡಿಬೈಲು ನಿವಾಸಿ ಪ್ರಭಾಕರ ಪಡುವೆಟ್ನಾಯ ನಿಧನ 

Suddi Udaya

ಪಿಯುಸಿ ಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದ ಆಕರ್ಶ್ ಪಿಎಸ್ ಗೆ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ

Suddi Udaya

ಮಲೆಬೆಟ್ಟು ಹಾ.ಉ.ಸಂ. ನಿರ್ದೇಶಕ ಪ್ರವೀಣ್ ಪೂಜಾರಿ ಬಿಜೆಪಿ ಸೇರ್ಪಡೆ

Suddi Udaya
error: Content is protected !!