July 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಎಸ್‌ಐಆ‌ರ್ ವೇಳಾಪಟ್ಟಿ ಪರಿಷ್ಕರಣೆ: ಆ.8ರ ತನಕ ವಿಸ್ತರಣೆ

ಬೆಳ್ತಂಗಡಿ: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳಾಪಟ್ಟಿ ಯನ್ನು ಪರಿಷ್ಕರಿಸಲಾಗಿದ್ದು, ಜು. 29ರ ಬದಲು ಗಣತಿ ನಮೂನೆಗಳನ್ನು ತುಂಬಲು ಆ. 8ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರು ಜು. 14ರಂದು ಬರೆದ ಪತ್ರ ಪರಿಗಣಿಸಿ ಭಾರತ ಚುನಾವಣಾ ಆಯೋಗವು ಎಸ್‌ಐಆರ್‌ ವೇಳಾಪಟ್ಟಿ ಪರಿಷ್ಕರಿಸಿದೆ. ಅದರಂತೆ ಗಣತಿ ನಮೂನೆಗಳ ಭರ್ತಿಗೆ 10 ದಿನ, ಕರಡು ಮತದಾರರ ಪಟ್ಟಿ ಪ್ರಕಟನೆಗೆ 12 ದಿನ, ಆಕ್ಷೇಪಣೆ ಸಲ್ಲಿಸಲು 7, ನೋಟಿಸ್ ಹಂತ, ದೂರು, ಆಕ್ಷೇಪಣೆಗಳ ವಿಲೇವಾರಿಗೆ 12 ದಿನ, ಅಂತಿಮ ಮತದಾರರ ಪಟ್ಟಿ ಪ್ರಕಟನೆಗೆ 12ದಿನ ವಿಸ್ತರಣೆ ಆಗಲಿದೆ. ಈ ಹಿಂದೆ ಗಣತಿ ನಮೂನೆಗಳ ವಿತರಣೆಗೆ ಬಿಎಲ್‌ಒಗಳ ಭೇಟಿಗೆ ಜುಲೈ 29 ಕೊನೆ ದಿನವಾಗಿತ್ತು, ಈಗ ಆಗಸ್ಟ್ 8ರವರೆಗೆ ಅವಕಾಶ ಇರಲಿದೆ. ಕರಡು ಮತದಾರರ ಪಟ್ಟಿ ಪ್ರಕಟಣೆ ಆ.5ರ ಬದಲು ಆ.17ಕ್ಕೆ ಆಗಲಿದೆ. ದೂರು, ಆಕ್ಷೇಪಣೆಗಳ ಸಲ್ಲಿಕೆ ಅವಧಿಯನ್ನು ಆಗಸ್ಟ್ 8ರಿಂದ ಸೆ.9ಕ್ಕೆ ಇದ್ದದ್ದನ್ನು ಆಗಸ್ಟ್ 17ರಿಂದ ಸೆ.16 ರವರೆಗೆ ವಿಸ್ತರಿಸಲಾಗಿದೆ.

Related posts

ಗರ್ಡಾಡಿಯಲ್ಲಿ ಭಾರಿ ಮಳೆಗೆ ಮಣ್ಣು ಕುಸಿದು ಮನೆಗೆ ಹಾನಿ, ಅದೃಷ್ಟವಶಾತ್ ಪಾರಾದ ಮನೆಯವರು

Suddi Udaya

ಜ.4: ವಿದ್ವತ್ ಪಿ ಯು. ಕಾಲೇಜು ಗುರುವಾಯನಕೆರೆಯಲ್ಲಿ ತಾಲೂಕು ಮಟ್ಟದ ಪುರುಷರ ಹಾಗೂ ಆಹ್ವಾನಿತ ಮಹಿಳೆಯರ ವಾಲಿಬಾಲ್ ಪಂದ್ಯಾಟ.

Suddi Udaya

ಬೆಳ್ತಂಗಡಿ: ಸರಕಾರಿ ಶಾಲೆಗಳ ನೂತನ ಕೊಠಡಿ ನಿರ್ಮಾಣಕ್ಕೆ ರೂ.1.715 ಕೋಟಿ ಅನುದಾನ ಮಂಜೂರು: ಹರೀಶ್ ಪೂಂಜ

Suddi Udaya

ಬೆಳ್ತಂಗಡಿ ವಕೀಲರ ಸಂಘದ ನಿಯೋಗದಿಂದ ದ. ಕ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳ ಭೇಟಿ, ನೂತನ ನ್ಯಾಯಾಲಯ ಸಂಕೀರ್ಣ ಶಂಕು ಸ್ಥಾಪನೆ ಬಗ್ಗೆ ಚರ್ಚೆ

Suddi Udaya

ಕುವೆಟ್ಟು ಸ. ಉ. ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ ರವರಿಗೆ ‘ಮಕ್ಕಳ ಸ್ನೇಹಿ ಶಿಕ್ಷಕ’ ಪ್ರಶಸ್ತಿ

Suddi Udaya

ಹರೀಶ್ ಪೂಂಜರ ಪರ ಚುನಾವಣಾ ಪ್ರಚಾರಕ್ಕೆ ಮುಂಬೈ ಉದ್ಯಮಿ ಸುರೇಶ್ ಪೂಜಾರಿ

Suddi Udaya
error: Content is protected !!