ಬೆಳ್ತಂಗಡಿ: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳಾಪಟ್ಟಿ ಯನ್ನು ಪರಿಷ್ಕರಿಸಲಾಗಿದ್ದು, ಜು. 29ರ ಬದಲು ಗಣತಿ ನಮೂನೆಗಳನ್ನು ತುಂಬಲು ಆ. 8ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರು ಜು. 14ರಂದು ಬರೆದ ಪತ್ರ ಪರಿಗಣಿಸಿ ಭಾರತ ಚುನಾವಣಾ ಆಯೋಗವು ಎಸ್ಐಆರ್ ವೇಳಾಪಟ್ಟಿ ಪರಿಷ್ಕರಿಸಿದೆ. ಅದರಂತೆ ಗಣತಿ ನಮೂನೆಗಳ ಭರ್ತಿಗೆ 10 ದಿನ, ಕರಡು ಮತದಾರರ ಪಟ್ಟಿ ಪ್ರಕಟನೆಗೆ 12 ದಿನ, ಆಕ್ಷೇಪಣೆ ಸಲ್ಲಿಸಲು 7, ನೋಟಿಸ್ ಹಂತ, ದೂರು, ಆಕ್ಷೇಪಣೆಗಳ ವಿಲೇವಾರಿಗೆ 12 ದಿನ, ಅಂತಿಮ ಮತದಾರರ ಪಟ್ಟಿ ಪ್ರಕಟನೆಗೆ 12ದಿನ ವಿಸ್ತರಣೆ ಆಗಲಿದೆ. ಈ ಹಿಂದೆ ಗಣತಿ ನಮೂನೆಗಳ ವಿತರಣೆಗೆ ಬಿಎಲ್ಒಗಳ ಭೇಟಿಗೆ ಜುಲೈ 29 ಕೊನೆ ದಿನವಾಗಿತ್ತು, ಈಗ ಆಗಸ್ಟ್ 8ರವರೆಗೆ ಅವಕಾಶ ಇರಲಿದೆ. ಕರಡು ಮತದಾರರ ಪಟ್ಟಿ ಪ್ರಕಟಣೆ ಆ.5ರ ಬದಲು ಆ.17ಕ್ಕೆ ಆಗಲಿದೆ. ದೂರು, ಆಕ್ಷೇಪಣೆಗಳ ಸಲ್ಲಿಕೆ ಅವಧಿಯನ್ನು ಆಗಸ್ಟ್ 8ರಿಂದ ಸೆ.9ಕ್ಕೆ ಇದ್ದದ್ದನ್ನು ಆಗಸ್ಟ್ 17ರಿಂದ ಸೆ.16 ರವರೆಗೆ ವಿಸ್ತರಿಸಲಾಗಿದೆ.















