25.7 C
ಪುತ್ತೂರು, ಬೆಳ್ತಂಗಡಿ
August 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘ ಕಕ್ಕಿಂಜೆ ಶಾಖೆ ಉದ್ಘಾಟನೆ

ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘ ಇದರ ಕಕ್ಕಿಂಜೆ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಜು.16 ರಂದು ಭಿಡೆ ಕಾಂಪ್ಲೆಕ್ಸ್ ಕಕ್ಕಿಂಜೆಯಲ್ಲಿ ನಡೆಯಿತು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಗುರು ಅತೀ ವಂ. ಜೇಮ್ಸ್ ಪಟ್ಟೇರಿಲ್ ಆಶೀವರ್ಚನ ನೀಡುತ್ತ, ಪರಿಶ್ರಮ, ದೂರ ದೃಷ್ಟಿಯ ಫಲ ಹೊಸ ಶಾಖೆಯ ರೂಪದಲ್ಲಿ ನಿಂತಿದೆ. ಸಂಘವು ವ್ಯವಹಾರ ಮಾತ್ರವಲ್ಲದೆ ಸಮಾಜದ ಅಭಿವೃದ್ಧಿಗೆ ಸಂಘ ಕೆಲಸ ಮಾಡುತ್ತಿದೆ. ಬ್ಯಾಂಕ್ ನೀಡುವ ಸಾಲ ಜನರ ಕನಸುಗಳಿಗೆ ಬಲ ನೀಡುತ್ತದೆ. ಸಿಬ್ಬಂದಿಗಳ ನಗುಮುಖದ ಸೇವೆಯೇ ಈ ಸಂಸ್ಥೆಯ ಬೆಳವಣಿಗೆ ಕಾರಣವಾಗಿದೆ. ಬ್ಯಾಂಕ್ ಶಿಕ್ಷಣ ಆರೋಗ್ಯ, ಪರಿಸರ ಸಂರಕ್ಷಣೆ ಸಮಾಜ ಮುಖಿ ಕಾರ್ಯದ ಮೂಲಕ ಜನಪ್ರಿಯವಾಗಲಿದೆ ಎಂದು ಶುಭ ಹಾರೈಸಿದರು.

ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಎ.ಜೆ. ಶಾಖೆಯನ್ನು ಉದ್ಘಾಟಿಸಿದರು. ಭದ್ರತಾಕೋಶದ ಉದ್ಘಾಟನೆಯನ್ನು ಸುಮಾ ಜೋಯಿ, ಗಣಕಯಂತ್ರದ ಉದ್ಘಾಟನೆಯನ್ನು ತೋಟತ್ತಾಡಿ ಸೈಂಟ್ ಆಂಟನೀಸ್ ಚರ್ಚ್ನ ಧರ್ಮಗುರು ಸೆಭಾಸ್ಟಿಯನ್ ಚೆಲಕಪಳ್ಳಿಲ್ ನೆರವೇರಿಸಿದರು. ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಡಾ| ಮುರಳಿಕೃಷ್ಣ ಇರ್ವತ್ರಾಯ ನಿರಖು ಠೇವಣಿ ಸರ್ಟಿಫಿಕೇಟ್ ವಿತರಿಸಿದರು.

ಈ ಸಂದರ್ಭದಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ ನಾರಾಯಣ ರಾವ್, ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ಪ್ರತಿಮಾ, ಕಟ್ಟಡ ಮಾಲಕ ನಾರಾಯಣ ಭಿಡೆ, ಪ್ರಭಾರ ಶಾಖಾ ವ್ಯವಸ್ಥಾಪಕಿ ಅಲೀನಾ ಇಜೆ, ಬೆಳ್ತಂಗಡಿ ಹಾಗೂ ಸ್ಥಳೀಯ ಧರ್ಮ ಪ್ರಾಂತ್ಯದ ಧರ್ಮಗುರುಗಳು, ಸಂಘದ ಉಪಾಧ್ಯಕ್ಷ ಜಾರ್ಜ್ ಎಮ್.ವಿ, ನಿರ್ದೇಶಕರುಗಳಾದ ಸೆಬಾಸ್ಟಿನ್ ವಿ.ಟಿ., ಬಿಜು ಪಿ.ಪಿ, ಚಾಕೋ ಎನ್.ಕೆ, ಜೈಸನ್ ಪಿ.ಎಸ್, ಬಾಬು ತೋಮಸ್, ಸೋಫಿ ಜೋಸೆಫ್, ಅಂದಾನಿ ಕೆ.ಡಿ, ಸೆಬಾಸ್ಟಿನ್, ಪಿಲೋಮಿನಾ ವಿ, ಅಜಯ್ ಕೆ.ಎ, ಸೆಬಾಸ್ಟಿನ್ ಪಿ.ಟಿ, ಲಾಲಿ ಮಾಣಿ, ನಾಮನಿರ್ದೇಶಕ ದೇವಸ್ಯ ಎಂ.ಪಿ., ಹಾಗೂ ಆಡಳಿತ ಮಂಡಳಿ ಸದಸ್ಯರುಗಳು, ಮಾಜಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮನೋಜ್ ಪಿ.ಎ ಪ್ರಸ್ತಾವಿಸಿ ಸ್ವಾಗತಿಸಿದರು. ನಾಮ ನಿರ್ದೇಶಕ ಮಾತುಕುಟ್ಟಿ ಧನ್ಯವಾದ ನೀಡಿದರು.

Related posts

ಕುಣಿತ ಭಜನಾ ಪಂಥೋ 2024: ಗುರುವಾಯನಕೆರೆ ಶ್ರೀ ಭ್ರಾಮರಿ ಭಜನಾ ಮಂಡಳಿಗೆ ದ್ವಿತೀಯ ಸ್ಥಾನ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ಮುಖ್ಯಕಾರ್ಯನಿರ್ವಹರ್ಣಾಧಿಕಾರಿಯಾಗಿ ಶಶಿಧರ ನೇಮಕ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಸೈನಿಕನ ಮಾತು- ಉಪನ್ಯಾಸ ಕಾರ್ಯಕ್ರಮ

Suddi Udaya

ಉಜಿರೆ: ಹದಿಹರೆಯದ ವಿದ್ಯಾರ್ಥಿನಿಯರಿಗೆ ಆರೋಗ್ಯ ಮಾಹಿತಿ

Suddi Udaya

ನಡ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜಯಲಕ್ಷ್ಮಿಗೆ ಶ್ರದ್ಧಾಂಜಲಿ ಸಮರ್ಪಣೆ

Suddi Udaya
error: Content is protected !!