ಹತ್ಯಡ್ಕ: ರಾಣೆಯಾರ್ ಸಮಾಜ ಸೇವಾ ಸಂಘ ವಲಯ ಶಾಖೆ ತುಂಬೆತ್ತಡ್ಕ ಇದರ ವತಿಯಿಂದ ಜು.12 ರಂದು ಅಂಗನವಾಡಿ ಮತ್ತು ಶಾಲಾ ಕಾಲೇಜು ಮಕ್ಕಳಿಗೆ ಪುಸ್ತಕವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮಹಾಬಲ ಕೆ., ನಿವೃತ್ತ ಟೆಲಿಫೋನ್ ಆಫೀಸರ್ ಸುಮತಿ ಎಮ್.ಆರ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ, ನಿವೃತ್ತ ಆರೋಗ್ಯ ಸಹಾಯಕಿ ಪದ್ಮಾವತಿ ಆರ್, ಕಾಲಭೈರವ ಸ್ವಾಮಿಶ್ರೀ ಮಾರಿ ಅಮ್ಮನವರ ಮಾರಿಗುಡಿ ತುಂಬೆತ್ತಡ್ಕ ಇದರ ಮೊಕ್ತೇಸರರಾದ ಶ್ರೀಮತಿ ಪರಮೇಶ್ವರಿ ಹಾಗೂ ಅಧ್ಯಕ್ಷ ಮೋಹನ ಟಿ.ಕೆ ಉಪಸ್ಥಿತರಿದ್ದರು.















