ಬೆಳ್ತಂಗಡಿ: ತುಳುಕೂಟ ಇಸ್ರೇಲ್ ಇದರ ವತಿಯಿಂದ ಅಳದಂಗಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಶಕ್ತ(ಅನಾರೋಗ್ಯದಿಂದ ಬಳಲುತ್ತಿರುವ)ರಿಗೆ ತಲಾ 10,000 ರೂ.ಗಳಂತೆ ಆರ್ಥಿಕ ನೆರವನ್ನು ಜು16 ರಂದು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ ಅಜಿಲರವರು ಹಸ್ತಾಂತರಿಸಿದರು.
ಈ ಸಂದರ್ಭ ಸತ್ಯದೇವತಾ ಕಲಾತಂಡದ ಪೂರ್ವಾಧ್ಯಕ್ಷ ಸುಂದರ ಪೂಜಾರಿ ನೀರಲ್ಕೆ, ಶ್ರೀಮತಿ ಚೇತನಾ ಸಂದೀಪ್, ಟೀಂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ಆನಂದ ಪೂಜಾರಿ ನೀರಲ್ಕೆ, ಅಭಿಷೇಕ್ ಪೂಜಾರಿ ನೀರಲ್ಕೆ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಎಬಿ ರವರು ಉಪಸ್ಥಿತರಿದ್ದರು.















