ಬೆಳ್ತಂಗಡಿ:ಶ್ರೀ ಗುರುರಾಯಣಸ್ವಾಮಿ ಸೇವಾ ಸಂಘದ ಬೆಳ್ತಂಗಡಿ ವತಿಯಿಂದ ಮರೋಡಿ ಪೊಸರಡ್ಕ ಕ್ಷೇತ್ರಕ್ಕೆ ಸಂಘದ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪು ರವರು ಮರೋಡಿ ಪೊಸರಡ್ಕ ಕ್ಷೇತ್ರದ ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಉಚ್ಚೂರುರವರ ಮುಖಾಂತರ ದೇಣಿಗೆಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಪೀತಾಂಬರ ಹೆರಾಜೆ, ಯೋಗೀಶ್ ಕುಮಾರ್ ನಡಕ್ಕರ, ಜಯರಾಮ್ ಬಂಗೇರ ಹೆರಾಜೆ, ಉಪಾಧ್ಯಕ್ಷರಾದ ಸುಂದರ ಪೂಜಾರಿ, ಕಾರ್ಯದರ್ಶಿ ನಿತೀಶ್ ಕೋಟ್ಯಾನ್ ವೇಣೂರು,ಕೋಶಾಧಿಕಾರಿ ಪ್ರಶಾಂತ್ ಮಚ್ಚಿನ, ಜೊತೆ ಕಾರ್ಯದರ್ಶಿ ಸಂತೋಷ್ ಉಪ್ಪಾರು,ಸುಮತಿ ಪ್ರಮೋದ್ ಹಾಗೂ ಇತರರು ಉಪಸ್ಥಿತರಿದ್ದರು.












