
ಬೆಳ್ತಂಗಡಿ: ನಾವೂರು ನಿವಾಸಿ ವಿಲ್ಫ್ರೇಡ್ ಡಿಸೋಜಾ ಎಂಬವರ ಮನೆಯ ಡೈನಿಂಗ್ ಹಾಲ್ ನಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡ ಘಟನೆ ಜು. 19 ರಂದು ಮಧ್ಯಾಹ್ನ ನಡೆದಿದೆ. ಹಾವನ್ನು ಕಂಡ ಮನೆಯವರು ತಕ್ಷಣವೇ ಉರಗ ರಕ್ಷಕ ಲಾಯಿಲದ ಸ್ನೇಕ್ ಅಶೋಕ ಕರೆ ಮಾಡಿ ತಿಳಿಸಿ, ಅವರು ಸುಮಾರು ಎಂಟು ಅಡಿ ಉದ್ದವಿದ್ದ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಬಳಿಕ ಕಾಡಿಗೆ ಬಿಟ್ಟಿದ್ದಾರೆ.

ಮಳೆಗಾಲದಲ್ಲಿ ಬೆಚ್ಚಗಿನ ವಾತಾವರಣವನ್ನು ಹಾವುಗಳು ಆವರಿಸಿಕೊಂಡು ಬರುವುದರಿಂದ ಜನರು ಎಚ್ಚರದಿಂದ ಇರಬೇಕು.















