September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಲಿನಗೊಳ್ಳುತ್ತಿರುವ ಬಂಗಾಡಿ-ಕೊಲ್ಲಿ ಮಡಿಲು; ಸ್ವಚ್ಛತೆಗೆ ಗ್ರಾಮಸ್ಥರ ಆಗ್ರಹ

✍️ಸುದಿತ್ ಕುಂಜರ್ಪ

ಬೆಳ್ತಂಗಡಿ: ತಾಲೂಕಿನ ಪ್ರಕೃತಿ ರಮಣೀಯ ಪ್ರದೇಶ, ಬಂಗಾಡಿ ಸೀಮೆಯ ಜೋಡುಕರೆ ಕಂಬಳದ ಸಾಂಪ್ರದಾಯಿಕ ಭೂಮಿ, ಜಾನುವಾರುಗಳಿಗೆ ಮೇಯುವುದಕ್ಕೆ, ದಾಹ ನೀಗಿಸುವುದಕ್ಕೆ ನದಿಯ ನಡುವೆ ಹಚ್ಚ ಹಸಿರಿನಿಂದ ಕಂಗೊಳಿಸುವ ಬಂಗಾಡಿ-ಕೊಲ್ಲಿಯ ಮಡಿಲು ಮಾನವನ ಅರೆಪ್ರಜ್ಞೆತನದಿಂದ ಇಂದು ಮಲಿನಗೊಳ್ಳುತ್ತಿರುವುದು ಬೇಸರದ ಸಂಗತಿ.

ಬೆಳ್ತಂಗಡಿ ತಾಲೂಕಿನ ಪ್ರವಾಸಿ ತಾಣಗಳಾದ ಗಡಾಯಿಕಲ್ಲು(ನರಸಿಂಹಘಡ), ಬಂಡಾಜೆ, ದಿಡುಪೆ, ಎರ್ಮಯ್ ಫಾಲ್ಸ್, ಜೊತೆಗೆ ಪ್ರಸಿದ್ದ ಧಾರ್ಮಿಕ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ, ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಸದಾಶಿವರುದ್ರ ದೇವಸ್ಥಾನ, ಬಂಗಾಡಿ ಅರಮನೆ, ಅಳದಂಗಡಿ ಅರಮನೆ, ವೇಣೂರು ಗೊಮ್ಮಟ ವಿಗ್ರಹ, ಇತಿಹಾಸ ಪ್ರಸಿದ್ದ ಕಾಜೂರು ದರ್ಗಾಗಳಂತಹ ವೀಕ್ಷಣಾ ಹಾಗೂ ಪ್ರಾರ್ಥನ ಮಂದಿರಗಳನ್ನು ಹೊಂದಿದ್ದು, ದಿನಂಪ್ರತಿ ಸಾವಿರಾರು ಪ್ರವಾಸಿಗರು, ಭಕ್ತವರ್ಗ ಭೇಟಿ ನೀಡುತ್ತಿರುತ್ತಾರೆ.

ಅಂತೆಯೇ ತಾಲೂಕಿನ ಚಾರಣಪಥ ನೇತ್ರಾವತಿ ಪೀಕ್ ಅಥವಾ ಜಲಪಾತಗಳಾದ ಎರ್ಮಯ್, ಕಡಮಗುಂಡಿ ವೀಕ್ಷಣೆಗೆ ಬರುವಂತಹ ಚಾರಣಿಗರು, ಪ್ರವಾಸಿಗರು, ಬೈಕ್ ರೈಡರ್ ಗಳು ಪಕ್ಕದ ಬಂಗಾಡಿ-ಕೊಲ್ಲಿಯ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವುದಕ್ಕೆ ಬರುವ ಸಂದರ್ಭ ಆಹಾರ ಪದಾರ್ಥಗಳ ಪ್ಲಾಸ್ಟಿಕ್ ಕವರ್ ಗಳನ್ನು ಅಲ್ಲಲ್ಲೆ ಬಿಸಾಕಿ ಹೋಗುವ ಕೆಲಸವನ್ನು ಮಾಡುತ್ತಿದ್ದಾರೆ. ಜೊತೆಗೆ ಸ್ಥಳೀಯ ಕೆಲವೊಂದು ಪುಂಡಪೋಕರಿಗಳು ಕೊಲ್ಲಿಯ ತಟದಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡಿ ಉಪಯೋಗಿಸಿದ ಮದ್ಯ ಬಾಟಲಿಗಳು ಅಲ್ಲೆ ಹಾಕಿ ಜೊತೆಗೆ ಅವುಗಳನ್ನು ಪುಡಿಗೈದ ಪರಿಣಾಮವಾಗಿ ಇಂದು ಬಂಗಾಡಿ-ಕೊಲ್ಲಿಯ ಮಡಿಲೇ ಮಲಿನಗೊಳ್ಳುತ್ತಿದೆ. ಈ ಬಗ್ಗೆ ಅಲ್ಲಿಯ ಗ್ರಾಮಸ್ಥರು ಅಂತಹ ಕಿಡಿಗೇಡಿಗಳ ವಿರುದ್ದ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಸಾಂಪ್ರದಾಯಿಕ ಜೋಡುಕರೆ ಕಂಬಳದ ಪುಣ್ಯಭೂಮಿ:
ಬಂಗಾಡಿ-ಕೊಲ್ಲಿ ಎಂದಾಗ ನೆನಪಾಗುವುದೇ ಇಲ್ಲಿಯ ಸಾಂಪ್ರದಾಯಿಕ ಜೋಡುಕರೆ ಕಂಬಳ. ಬಂಗಾಡಿ ಸೀಮೆಗೆ ಒಳಪಟ್ಟಂತಹ ಬಂಗಾಡಿ-ಕೊಲ್ಲಿಯ ಕಂಬಳದ ಕರೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಕಂಬಳ ಆಯೋಜನೆ ಆಗುತ್ತಿದ್ದು, ನೂರಾರು ಜತೆ ಕೋಣಗಳು ಭಾಗವಹಿಸುತ್ತಿದೆ. ನದಿಯ ತೀರದಲ್ಲಿ ನಡೆಯುವ ಕಂಬಳವನ್ನು ನೋಡುವುದೇ ಆನಂದವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳು ಕಂಬಳವನ್ನು ವೀಕ್ಷಿಸುವುದಕ್ಕಾಗಿ ಬಂದು ಸೇರುತ್ತಾರೆ. ಇಂತಹ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಮಹತ್ವವನ್ನು ಹೊಂದಿದ ಭೂಮಿ ಮಲೀನಗೊಳ್ಳುತ್ತಿರುವ ಬಗ್ಗೆ ಸ್ಥಳೀಯರು ವಿಷಾದ ವ್ಯಕ್ತ ಪಡಿಸಿದ್ದಾರೆ.

ಸೂಚನಾ ಫಲಕ ಅವಶ್ಯಕ:
ಪ್ರಕೃತಿ ರಮಣೀಯ ಪ್ರದೇಶವಾದ ಕೊಲ್ಲಿ ಪರಿಸರದಲ್ಲಿ ಪ್ಲಾಸ್ಟಿಕ್, ಮದ್ಯದ ಬಾಟಲಿಗಳನ್ನು ಕಂಡಾಗ ಬೇಸರವಾಗುತ್ತಿದೆ. ಕೊಲ್ಲಿಯ ನದಿಯ ತೀರದಲ್ಲಿ ತಂಪಾದ ಗಾಳಿಯ ಜೊತೆಗೆ ಪ್ರಕೃತಿ ಸೌಂದರ್ಯವನ್ನು ನೋಡುವುದಕ್ಕೆ ಅನೇಕ ಜನರು ಬರುತ್ತಾರೆ. ಬಂದವರಲ್ಲಿ ಕೆಲವರು ಈ ರೀತಿಯ ಕೆಲಸ ಮಾಡುವುದರಿಂದ ಈ ಪರಿಸರ ಹಾಲಾಗುತ್ತಿದೆ. ಸಂಬಂಧಪಟ್ಟಂತಹ ಇಲಾಖೆ ಅಥವಾ ಸ್ಥಳೀಯ ಆಡಳಿತ ಸೂಚನಾ ಫಲಕಗಳನ್ನು ಹಾಕುವುದು ಅವಶ್ಯಕ.
ಸಿರಾಜ್ ಸ್ಥಳೀಯರು

Related posts

ಸುಂದರ ಮಲೆಕುಡಿಯ ಕೈ ಬೆರಳು ತುಂಡರಿಸಿ ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟ: ದಶಕಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ: ಅಕ್ಬರ್ ಬೆಳ್ತಂಗಡಿ

Suddi Udaya

ತಣ್ಣೀರುಪoತ: ಬೈಕ್ ಗಳ ಮುಖಾಮುಖಿ ಡಿಕ್ಕಿ: ಓರ್ವ ಮೃತ್ಯು

Suddi Udaya

ಧರ್ಮಸ್ಥಳ ಲಕ್ಷದೀಪೋತ್ಸವ : ರಾಜ್ಯಮಟ್ಟದ 44ನೇ ವಷ೯ದ ವಸ್ತುಪ್ರದರ್ಶನ ಉದ್ಘಾಟನೆ

Suddi Udaya

ಪುನೀತ್ ಕೆರೆಹಳ್ಳಿಯನ್ನು ಬಿಡುಗಡೆ ಮಾಡಿದ ಬೆಳ್ತಂಗಡಿ ಪೊಲೀಸರು

Suddi Udaya

ಲಾಯಿಲ: ಕುಂಟಿನಿ ಸ.ಕಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಧರ್ಮಸ್ಥಳ ಶ್ರೀ ಧ.ಮಂ. ಭಜನಾ ಪರಿಷತ್ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ರವರಿಗೆ ತಾಲೂಕು ಭಜನಾ ಪರಿಷತ್ ವತಿಯಿಂದ ಅಭಿನಂದನೆ

Suddi Udaya
error: Content is protected !!