ಮುಂಡಾಜೆ : ಜಿಲ್ಲಾ ರೈತ ತರಬೇತಿ ಕೇಂದ್ರ ಬೆಳ್ತಂಗಡಿ, ನೇತ್ರಾವತಿ ಮಹಿಳಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇದರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಮುಂಡಾಜೆಯಲ್ಲಿ ನಡೆಸಲಾಯಿತು.
ಎಲ್ ಸಿ ಆರ್ ಪಿ ಶಾಲಿನಿ ಸ್ವಾಗತಿಸಿ, ಒಕ್ಕೂಟದ ಅಧ್ಯಕ್ಷೆ ಭವಾನಿ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ರಬ್ಬರ್ ಸೊಸೈಟಿ ಅಧ್ಯಕ್ಷರು ಎಪಿಎಂಸಿ ಮಾಜಿ ಸದಸ್ಯರು ಪ್ರಗತಿಪರ ಕೃಷಿಕರು ಆದ ಶ್ರೀಧರ್ ಜಿ ಬಿಢೆ ಮತ್ತು ನಾರಾಯಣ ಫಡ್ಕೆ ಸಿಎ ಬ್ಯಾಂಕಿನ ಮಾಜಿ ಸಿಇಓ ಹಾಗೂ ಪ್ರಗತಿಪರ ಕೃಷಿಕರು ಮತ್ತು ವೇದಿಕೆಯಲ್ಲಿದ್ದ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀಧರ ಭಿಡೆಯವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಗಣೇಶ್ ಅಡಿಗ ಕೃಷಿ ಅಧಿಕಾರಿ ಬೆಳ್ತಂಗಡಿ ಇವರು ಬೆಳೆ ಸಮೀಕ್ಷೆ ಮಾಡುವ ವಿಧಾನ ಹಾಗೂ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಪ್ರಭಾಕರ ಮಯ್ಯ ಇವರು ಅಡಿಕೆಗೆ ಬರುವ ರೋಗಗಳು ಮತ್ತು ಅದರ ಪರಿಹಾರ ಬೋರ್ಡೋ ದ್ರಾವಣ ಮಾಡುವ ವೈಜ್ಞಾನಿಕ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಮನಮುಟ್ಟುವಂತೆ ತಿಳಿಸಿದರು. ಜಿಲ್ಲಾ ತರಬೇತಿ ಕೇಂದ್ರದ ಎ.ಟಿ.ಎಮ್ ಕುಸುಮ ಹಾಜರಿದ್ದರು. ಕೃಷಿಸಖಿ ದಿವ್ಯಶ್ರೀ ಧನ್ಯವಾದವಿತ್ತರು.















