July 23, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಬಸ್ ನಲ್ಲಿ ಮೊಬೈಲ್ ಕಳ್ಳತನ

ಬೆಳ್ತಂಗಡಿ : ಬಸ್ ಗಳಲ್ಲಿ ಮೊಬೈಲ್ ಕಳ್ಳತನ ಮಾಡಿದ ಘಟನೆ ಬುಧವಾರ ಸಂಜೆ ನಡೆದಿದೆ. ಉಜಿರೆಯಿಂದ ಚಾರ್ಮಾಡಿ ಮೂಲಕ ಸಂಚರಿಸುವ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಕಡೆ ಸಂಚರಿಸುವ ಬಸ್ ಗಳಲ್ಲಿ 3 ಮಂದಿಯ ಮೊಬೈಲ್ ಕಳ್ಳತನವಾಗಿದೆ.ಸಂಜೆ ಹೊತ್ತು ಬಸ್ ಗಳಲ್ಲಿ ವಿಪರೀತ ರಶ್ ಇರುತ್ತದೆ. ಈ ವೇಳೆ ಮೊಬೈಲ್ ಕಳ್ಳತನ ನಡೆದಿದ್ದು,ಎರಡು ಬಸ್ ಗಳಲ್ಲಿ ಕಕ್ಕಿಂಜೆ ತಲುಪಿದ ವೇಳೆ ಮೊಬೈಲ್ ಬ್ಯಾಗ್ ಗಳಿಂದ ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಮೊಬೈಲ್ ಕಳೆದುಕೊಂಡವರು ಯುವತಿಯರಾಗಿದ್ದು ಎಲ್ಲರೂ ಖಾಸಗಿ ಉದ್ಯೋಗಿಗಳಾಗಿದ್ದಾರೆ. ಈ ವೇಳೆ ಕಕ್ಕಿಂಜೆಯಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ತಪಾಸಣೆ ಮಾಡಿದ್ದರೂ ಕಳ್ಳತನವಾದ ಮೊಬೈಲ್ ಗಳು ಪತ್ತೆಯಾಗಿಲ್ಲ. ಉಜಿರೆಯಲ್ಲಿ ಬಸ್ ಹತ್ತುವ ವೇಳೆ ವಿಪರೀತ ರಶ್ ಮಧ್ಯೆ ಮೊಬೈಲ್ ಗಳನ್ನು ಕಳ್ಳತನ ನಡೆಸಿರುವ ಸಾಧ್ಯತೆಯಿದ್ದು,ಇದರ ಹಿಂದೆ ಮೊಬೈಲ್ ಕಳ್ಳರ ತಂಡ ಸಕ್ರಿಯವಾಗಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಬಸ್ ನಿರ್ವಾಹಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಮೊಬೈಲ್ ಕಳೆದುಕೊಂಡವರಿಗೆ ತಿಳಿಸಿದ್ದಾರೆ.

Related posts

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ಡಾ| ಡಿ ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಪ್ರಯುಕ್ತ ಗೌರವಾರ್ಪಣೆ

Suddi Udaya

ಮನು ಉಜಿರೆ ಸಾಹಿತ್ಯ ಸಂಯೋಜನೆಯ “ದಕ್ಷಿಣ ಮಂತ್ರಾಲಯದ ಈ ಪುಣ್ಯಕ್ಷೇತ್ರ” ಧ್ವನಿಸುರುಳಿ ಬಿಡುಗಡೆ

Suddi Udaya

ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ಚಂದ್ರಯಾನ – 3 ಯಶಸ್ವಿಯ ಸಂಭ್ರಮಾಚರಣೆ

Suddi Udaya

ಚಂದ್ರಹಾಸ ಬಳಂಜರಿಂದ ಸಂವಹನ ಕೌಶಲ್ಯದ ಬಗ್ಗೆ ತರಬೇತಿ

Suddi Udaya

ಕ್ಯಾಂಟಿನ್ ಒಳಗಡೆ ವೇಶ್ಯಾವಟಿಕೆ ದಂಧೆ ಬಯಲು ; ಬೆಳ್ತಂಗಡಿ ಪೊಲೀಸರಿಂದ ದಾಳಿ: ಪ್ರಕರಣ ದಾಖಲು

Suddi Udaya

ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾಗಿ ಮನೋಜ್ ಎನ್ ಸಾಲ್ಯಾನ್ ಆಯ್ಕೆ

Suddi Udaya
error: Content is protected !!