ಬೆಳ್ತಂಗಡಿ: ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕುವ ಕೆಲಸ ದೇಶದಲ್ಲಿ ನಡೆಯುತ್ತಿದೆ. ಕಾನೂನು ಬದ್ಧವಾಗಿ ನಡೆಯುತ್ತಿರುವ ಹೋರಾಟದಲ್ಲಿ ಆರ್ ಎಸ್ ಎಸ್ ಗೂಂಡಾಗಳನ್ನು ಇಟ್ಟುಕೊಂಡುವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ, ಲಾಠಿ ಚಾರ್ಜ್ ಮಾಡುತ್ತಿರುವುದು ಪ್ರಜಾಪ್ರಭುತ್ವದ ಹಕ್ಕಿನ ದಮನ.
ಈ ಹಿಂದೆ ಜಂತರ್ ಮಂತರ್ ನಲ್ಲಿ ಕೃಷಿ ನೀತಿ ವಿರೋಧಿಸಿ ರೈತರು ನಡೆಸಿದ ಹೋರಾಟದಲ್ಲಿ ಬಿಜೆಪಿ ಗೂಂಡಾಗಳು ರೈತರ ಮೇಲೆ ವಾಹನಗಳನ್ನು ಹರಿಸಿ ಅವರ ಸಾವುಗಳನ್ನು ನೋಡಿ ಬಳಿಕ ಪ್ರಧಾನಿ ಕ್ಷಮೆ ಯಾಚಿಸಿ ಕೃಷಿ ನೀತಿಯನ್ನು ಹಿಂಪಡೆದಿದ್ದರು. ಇದೇ ರೀತಿಯಲ್ಲಿ ದೇಶದಲ್ಲಿ ವಿದ್ಯಾರ್ಥಿಗಳ ಮಾರಣಹೋಮ ನಡೆಯುತ್ತಿದೆ. ಎಲ್ಲಾ ಕಾನೂನು ವ್ಯವಸ್ಥೆಯನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದು ನಿರಂತರವಾಗಿ ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆ ಮಾಡುತ್ತಾ ದಮನಕಾರಿ ನೀತಿ ಮುಂದುವರಿಸುತ್ತಿದ್ದಾರೆ ಹಾಗಾಗಿ ದೇಶ ರಕ್ಷಣೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಕೆ.ಎಂ. ನಾಗೇಶ್ ಕುಮಾರ್ ಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.















