28.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿ

ಉಜಿರೆ ರಿಕ್ಷಾ ಪಾರ್ಕಿಂಗ್ ಸಮಸ್ಯೆ- ಶಾಸಕರ ನೇತೃತ್ವದಲ್ಲಿ ಸಭೆ :ವಾಹನ ಚಾಲಕರಿಗೆ, ಅಂಗಡಿ ಮಾಲಕರಿಗೆ ತೊಂದರೆ ಉಂಟಾಗದಂತೆ ಹೆದ್ದಾರಿ ಬದಿ ಗುರುತು ಹಾಕಿ ರಿಕ್ಷಾ ಪಾರ್ಕಿಂಗ್ ಗೆ ವ್ಯವಸ್ಥೆ: ಶಾಸಕರ ಭರವಸೆ

ಬೆಳ್ತಂಗಡಿ:ಉಜಿರೆ ಪೇಟೆಯಲ್ಲಿ ರಿಕ್ಷಾ ಪಾರ್ಕಿಂಗ್ ಗೆ ಉಂಟಾಗಿರುವ ಸಮಸ್ಯೆ ಕುರಿತು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಜು.25ರಂದು ಬೆಳ್ತಂಗಡಿಯ ಎಸ್‌ ಡಿಎಂ ಕಲಾಮಂದಿರದಲ್ಲಿ ಸಭೆ ಜರುಗಿತು.

ಉಜಿರೆಯಲ್ಲಿ ರಿಕ್ಷಾ ಪಾರ್ಕಿಂಗ್ ಬಹುಕಾಲದ ಸಮಸ್ಯೆಯಾಗಿದ್ದು ಇದೀಗ ಇಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆದ ಬಳಿಕ ಇದು ಇನ್ನಷ್ಟು ಬಿಗಡಾಯಿಸಿದ್ದು ಹಲವು ಕಡೆಗಳಲ್ಲಿ ರಿಕ್ಷಾ ಪಾರ್ಕಿಂಗ್ ಗೆ ಜಾಗವಿಲ್ಲವಾಗಿ ರಿಕ್ಷಾ ಚಾಲಕರು ಸಾಕಷ್ಟು ಕಷ್ಟ ಎದುರಿಸುತ್ತಿದ್ದಾರೆ.ಉಜಿರೆಯಲ್ಲಿ ಬೆಳಾಲು, ಸೋಮಂತಡ್ಕ, ಗುರಿಪಳ್ಳ, ಸುರ್ಯ, ಬಸ್ ನಿಲ್ದಾಣ, ಚಾರ್ಮಾಡಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ರಿಕ್ಷಾ ಪಾರ್ಕಿಂಗ್ ಇದೆ.ಆದರೆ ಇಲ್ಲಿ ಪಾರ್ಕಿಂಗಿಗೆ ಜಾಗದ ಕೊರತೆಯೂ ಇದೆ.ಇದರಿಂದ ರಿಕ್ಷಾ ಚಾಲಕರಿಗೆ,ವರ್ತಕರಿಗೆ ತೊಂದರೆ ಉಂಟಾಗುತ್ತಿದೆ. ಅಂಗಡಿಗಳ ಮುಂಭಾಗ, ರಸ್ತೆ ವ್ಯಾಪ್ತಿ ಸೇರಿದಂತೆ ಅಲ್ಲಲ್ಲಿ ರಿಕ್ಷಾಗಳನ್ನು ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ.ರಿಕ್ಷಾ ಪಾರ್ಕಿಂಗ್ ಸಮಸ್ಯೆ ಕುರಿತು ಉಜಿರೆಯ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ಶಾಸಕ ಹರೀಶ್ ಪೂಂಜ ಅವರಿಗೆ ಮನವಿ ಸಲ್ಲಿಸಲಾಗಿತ್ತು.

ಇದರ ಬಗ್ಗೆ ಸಭೆ ಕರೆದು ಮಾತನಾಡಿದ ಅವರು ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ, ಇತರ ವಾಹನ ಚಾಲಕರಿಗೆ, ಅಂಗಡಿ ಮಾಲಕರಿಗೆ ತೊಂದರೆ ಉಂಟಾಗದಂತೆ ಹೆದ್ದಾರಿ ಬದಿ ಗುರುತು ಹಾಕಿ ರಿಕ್ಷಾ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಿಕೊಡಲಾಗುವುದು.ಇದಕ್ಕೆ ಸಾರ್ವಜನಿಕರ ಸಹಿತ ಎಲ್ಲರೂ ಸಹಕಾರ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಬೆಳ್ತಂಗಡಿ ಸಂಚಾರಿ ಠಾಣೆಯ ಎಸ್ ಐ ಕಿಶೋರ್, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಇ ಚಂದ್ರಶೇಖರ್, ಆರ್ ಟಿಒ ಚರಣ್, ಉಜಿರೆ ಗ್ರಾಪಂ ಪಿಡಿಒ ಪ್ರಕಾಶ್ ಶೆಟ್ಟಿ, ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ ಉಮೇಶ್, ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್., ರವಿಕುಮಾರ್ ಬರೆಮೇಲು ಮತ್ತಿತರರು ಉಪಸ್ಥಿತರಿದ್ದರು 400 ಕ್ಕಿಂತ ಅಧಿಕ ಮಂದಿ-ಬೆಳಿಗ್ಗೆ 9ಗಂಟೆಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಲ್ಲಿ ಒಟ್ಟಾದ ರಿಕ್ಷಾ ಚಾಲಕ-ಮಾಲಕರು ಅಲ್ಲಿಂದ ಸಭೆಗೆ ತೆರಳಿದರು.ಸುಮಾರು 400ಕ್ಕಿಂತ ಅಧಿಕ ಮಂದಿ ಭಾಗವಹಿಸಿದ್ದರು ಬೆಳಿಗ್ಗೆ 9ರಿಂದ ಮಧ್ಯಾಹ್ನ 10ಗಂಟೆ ತನಕ ಉಜಿರೆಯಲ್ಲಿ ರಿಕ್ಷಾ ಸೇವೆ ಲಭ್ಯವಿರಲಿಲ್ಲ. ಶಾಸಕರು ನೀಡಿರುವ ಭರವಸೆ ಸಮಾಧಾನ ತಂದಿದ್ದು,ಮುಂದಿನ ದಿನಗಳಲ್ಲಿ ಇದಕ್ಕೊಂದು ಸೂಕ್ತ ಪರಿಹಾರ ದೊರಕುವ ನಿರೀಕ್ಷೆ ಇದೆ ಎಂದು ಉಜಿರೆ ರಿಕ್ಷಾ ಚಾಲಕ-ಮಾಲಕ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

Related posts

ತಣ್ಣೀರುಪಂತ : ಶಾಸಕ ಹರೀಶ್ ಪೂಂಜ ಹಾಗೂ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲರಿಗೆ ಗೌರವಾರ್ಪಣೆ: ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನ, ಅಭಿಮಾನಿ ಬಳಗ ಹಾಗೂ ಊರಿನ ಸಮಸ್ತ ಬಂಧುಗಳ ವತಿಯಿಂದ ಅಭಿನಂದನಾ ಕಾರ್ಯಕ್ರಮ

Suddi Udaya

ನಡ ಗ್ರಾ.ಪಂ ನಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ

Suddi Udaya

ಗುರುವಾಯನಕೆರೆ: ಕೆರೆಯನ್ನು ಅಭಿವೃದ್ಧಿ ಪಡಿಸಲು ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

Suddi Udaya

ಉಜಿರೆ-ಉಪ್ಪಿನಂಗಡಿ ಶ್ರೀದುರ್ಗಾಟೆಕ್ಸ್ ಟೆಲ್ಸ್ ನಲ್ಲಿ ಹೊಸ ಕಲೆಕ್ಷನ್‌ನೊಂದಿಗೆ ಶೇ.10 ರಿಂದ 20ರಷ್ಟು ಡಿಸ್ಕೌಂಟ್

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಚೆಸ್ ಪಂದ್ಯಾಟ ಉದ್ಘಾಟನೆ

Suddi Udaya

ಆ.14 ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಅರ್ಹ ವಿದ್ಯಾರ್ಥಿಗಳಿಗೆ ರೂ.20 ಲಕ್ಷ ಸ್ಕಾಲರ್ ಸಿಪ್ ಹಸ್ತಾಂತರ

Suddi Udaya
error: Content is protected !!