July 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಸಿದ್ದವನ ಗುರುಕುಲದಲ್ಲಿ ಗುರುವಂದನಾ ವ್ಯಾಸಪೂರ್ಣಿಮೆ ಮತ್ತು ‘ವಂದೇ -ಗುರುಪರಂಪರಾಮ್’ ಕಾರ್ಯಕ್ರಮ

ಬೆಳ್ತಂಗಡಿ : ಪಶ್ಚಿಮ ಬಂಗಾಳದ ಪದಚಿಹ್ನದಿಂದ ಹೊರಟು ಇಡೀ ಅಖಂಡ ಭಾರತ ವ್ಯಾಪಿಸಿದ ವಂದೇ ಮಾತರಂ ನೂರೈವತ್ತು ವರ್ಷ ದಾಟಿದ ತರುವಾಯವೂ ಅಖಂಡ ಭಾರತದ ಸಾರ್ವಕಾಲಿಕ ರಣಮಂತ್ರ ಎಂದು ಬರಹಗಾರ ಶಿವಪ್ರಸಾದ್ ಸುರ್ಯ ಹೇಳಿದರು. ಶಸ್ತ್ರ ಮತ್ತು ಶಾಸ್ತ್ರಗಳ ಪ್ರತೀಕವಾಗಿ, ಅಧ್ಯಾತ್ಮದ ಅನುಭೂತಿಯಾಗಿ, ಗಿರಿ ಕಾನನಗಳ ವಸ್ತುಗಳನ್ನು ಒಳಗೊಂಡ ಭಾರತೀಯರ ಆರಾಧನಾ ಪದ್ದತಿಗಳ ಕಲಶಪ್ರಾಯವಾಗಿ ವಂದೇಮಾತರಂ ಹಾಡು ಮೈದಳೆದಿದ್ದು, ಆನಂದ ಮಠದಲ್ಲಿ ಬರುವ ಸಂತಾನ ಸನ್ಯಾಸಿಗಳ ಕಥಾವಸ್ತು ಭಾರತಕ್ಕಿರುವ ನಾನಾ ಸಾಧ್ಯತೆಗಳ ಪ್ರತೀಕ ಎಂದವರು ಬಣ್ಣಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಸಿದ್ದವನ ಗುರುಕುಲ ಉಜಿರೆಯಲ್ಲಿ ಆಯೋಜಿಸಿದ್ದ ಗುರುವಂದನಾ ವ್ಯಾಸಪೂರ್ಣಿಮೆ ಮತ್ತು ವಂದೇ ಮಾತರಂ ನೂರೈವತ್ತು ವರ್ಷಗಳ ಸಂಭ್ರಮಾಚರಣೆ ‘ವಂದೇ -ಗುರುಪರಂಪರಾಮ್’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಪ್ರೊ.ಗಣಪತಿ ಭಟ್ ಕುಳಮರ್ವ ವಹಿಸಿ ಪ್ರಾಸ್ತಾವನೆಗೈದರು. ಅಭಾಸಾಪ ವಿಭಾಗ ಸಂಯೋಜಕ್ ಸುಂದರ ಶೆಟ್ಟಿ ಇಳಂತಿಲ, ತಾಲೂಕು ಸಮಿತಿ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿ , ಉಪಾಧ್ಯಕ್ಷ ರಾಮಕೃಷ್ಣ ಭಟ್, ಸಮಿತಿ ಸದಸ್ಯೆ ಶ್ರೀಮತಿ ಅಕ್ಷತಾ ಅಡೂರು, ಅಭಾಸಾಪ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀ ಪ್ರಕಾಶ್ ನಾರಾಯಣ್, ಸಿದ್ದವನ ಗುರುಕುಲ ಮುಖ್ಯ ಪಾಲಕರಾದ ಕೇಶವ್, ಮಹಿಳಾ ಪ್ರಕಾರ ಪ್ರಮುಖ್ ಶ್ರೀಮತಿ ವನಿತಾ ವಿ ಶೆಟ್ಟಿ, ಮಹಿಳಾ ಘಟಕ ಕಾರ್ಯದರ್ಶಿ ಶ್ರೀಮತಿ ಮೇಘನಾ ಪ್ರಶಾಂತ್, ಶ್ರೀಮತಿ ವಿದ್ಯಾ ಅಡೂರು,ಡಾllತಾರಕೇಶ್ವರಿ, ಶ್ರೀಮತಿ ವಿಜಯಲಕ್ಷ್ಮಿ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಮಿತಿ ಜತೆ ಕಾರ್ಯದರ್ಶಿ ಶ್ರೀಮತಿ ಸಂತೋಷಿಣಿ ಅವರ ಶಾರದಾ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡು , ಮಹಿಳಾ ಘಟಕ ಅಧ್ಯಕ್ಷೆ ಶ್ರೀಮತಿ ಆಶಾ ಅಡೂರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಮಿತಿ ಸ್ಥಾಪಕ ಅಧ್ಯಕ್ಷರಾದ ಡಾ.ಶ್ರೀಧರ್ ಭಟ್ ವಂದಿಸಿದರು. ಮಕ್ಕಳ ಪ್ರಕಾರ ಪ್ರಮುಖ್ ಶ್ರೀಮತಿ ಮೇಧಾ ಅವರ ವಂದೇ ಮಾತರಂ ನಿಂದ ಕಾರ್ಯಕ್ರಮ ಸಮಾಪನಗೊಂಡಿತು.

Related posts

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Suddi Udaya

ಬೆಳ್ತಂಗಡಿ ವಾಣಿ ಆಂ.ಮಾ. ಶಾಲೆಯಲ್ಲಿ ಮಕ್ಕಳ ಆಟದ ಮನೆ ಉದ್ಘಾಟನೆ

Suddi Udaya

ಕಟ್ಟಿಗೆಯ ತುಂಡಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಆರೋಪ: ಪತಿಯ ವಿರುದ್ಧ ಪತ್ನಿ ವೇಣೂರು ಪೊಲೀಸರಿಗೆ ದೂರು

Suddi Udaya

ಉಜಿರೆ: ಎಸ್ ಡಿ ಎಂ ಕಾಲೇಜು ಆಶ್ರಯದಲ್ಲಿ ಅಧಿವಕ್ತ ಪರಿಷದ್ ದ.ಕ. ಜಿಲ್ಲಾ ಘಟಕ ಮತ್ತು ಬೆಳ್ತಂಗಡಿ ವಕೀಲರ ಸಂಘದ ಸಹಯೋಗದಲ್ಲಿ ಸಂವಿಧಾನ ದಿನ ಆಚರಣೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭೇಟಿ

Suddi Udaya

ಪಡ್ಲಾಡಿ 35ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ರಚನೆ

Suddi Udaya
error: Content is protected !!