September 6, 2026
ಕರಾವಳಿಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ಮೈರಲ್ಕೆ ಓಡಿಲ್ನಾಳ: ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ಬ್ರಹ್ಮಕಲಶ ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

ಓಡಿಲ್ನಾಳ: ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠ ಅಷ್ಟಬಂಧ ಬ್ರಹ್ಮಕಲಶೋತ್ಸವವೂ ಡಿ.25ರಿಂದ ಜ.3ರವರೆಗೆ ಧಾರ್ಮಿಕ.ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಭ್ರಂಭಣೆಯಿಂದ ನಡೆಯಲಿದೆ.
1 ಸಾವಿರ ವರ್ಷಗಳ ಹಿಂದೆ ಬಂಗರಸರು ತಮ್ಮ ಸೈನ್ಯವನ್ನು ಶತ್ರು ಕೃತ್ಯಗಳಿಂದ ಸಂರಕ್ಷಿಸುವ ಉದ್ದೇಶದಿಂದ ಸೋಮಯಾಗವನ್ನು ಮಾಡಿಸಿ ಈ ಯಾಗದಿಂದ ಅವಿರ್ಭವಿಸಿದ ಶಕ್ತಿಯನ್ನು ಶ್ರೀಕ್ಷೇತ್ರ ಕಿರಾತ ಮೂರ್ತಿ ಸ್ವರೂಪದಲ್ಲಿ ಆರಾಧಿಸಿಕೊಂಡು ಬರುತ್ತಿದ್ದು.
ಆ ಪ್ರಕಾರವಾಗಿ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವರಿಗೆ ವೃತ್ತಾಕಾರ ಶಿಲಾಮಯ ಗರ್ಭಗುಡಿ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಗುಡಿ .ಶ್ರೀ ಗಣಪತಿ ದೇವರ ಗುಡಿ ಮತ್ತು ಶ್ರೀ ನಾಗದೇವರಿಗೆ ಕಟ್ಟೆಗಳನ್ನು ವಾಸ್ತು ಪ್ರಕಾರವಾಗಿ ನಿರ್ಮಾಣ ಮಾಡಿ ದೇವರ ಶಿವಲಿಂಗವನ್ನು ಬೆಳಾಲು ಶ್ರೀ ಮಾಯಾ ಮಹಾದೇವ ದೇವಸ್ಥಾನದಿಂದ ಡಿ.22ರಂದು ಎತ್ತಿನ ಗಾಡಿಯ ಮೂಲಕ ಪ್ರಾತ:ಕಾಲ ಗಂಟೆ 4 ರಿಂದ ಉಜಿರೆ ಬೆಳ್ತಂಗಡಿ ಗುರುವಾಯನ ಕೆರೆಯಲ್ಲಿ ವಿಶೇಷ ಪೂಜೆ ನೆರವೇರಿಸಿ ರೇಷ್ಮೆರೋಡು ಮಾರ್ಗವಾಗಿ ಭವ್ಯ ಶೋಭೆ ಯಾತ್ರೆಯೊಂದಿಗೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಬಾಲಾಲಯದಲ್ಲಿ ಪ್ರತಿಷ್ಠಾಪನೆಗೊಂಡು ಮಧ್ಯಾಹ್ನ 12:30ಕ್ಕೆ ಪೂಜೆ ನಡೆಯಲಿದೆ
ಡಿ.25ರಂದು ಬೆಳಗ್ಗೆ 11ಗಂಟೆಗೆ ಓಡಿಲ್ನಾಳ,.ಮಚ್ಚಿನ .ಕಳಿಯ. ನ್ಯಾಯತರ್ಪು .ಕುವೆಟ್ಟು. ಪಡಂಗಡಿ .ಸೋಣಂದೂರು. ಬೆಳ್ತಂಗಡಿ ನಗರ ಗ್ರಾಮಸ್ಥರಿಂದ ಹಸಿರುವಾಣಿ ಹೊರ ಕಾಣಿಕೆಯ ಭವ್ಯ ಶೋಭೆ ಯಾತ್ರೆ ನಡೆಯಲಿ ನಡೆಯಲಿದೆ
ಈಗಾಗಲೇ ಬ್ರಹ್ಮ ಕಲಸಶೋತ್ಸವದ ಪೂರ್ವಸಿದ್ಧತೆ ತಯಾರುಗಳು ಭರದಿಂದ ಸಾಗುತಿದೆ .ಊರ ಪರ ಊರ ಭಕ್ತರು ಪ್ರತಿದಿನ ಶ್ರಮದಾನ ಮೂಲಕ ಕರಸೇವೆ ಮಾಡುತ್ತಿದ್ದಾರೆ. ದೇವಾಲಯದ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಕೆಲಸಗಳು ಜನರ ಸಹಕಾರ ಹಾಗೂ ಶ್ರಮದಾನದಿಂದಲೇ ನಡೆದಿದೆ ಎನ್ನುತ್ತಾರೆ ದೇವಾಲಯದ ಆಡಳಿತ ಮಂಡಳಿ ಸದಸ್ಯರು.ಬ್ರಹ್ಮ ಕಲಸಶೋತ್ಸವಕ್ಕೆ ಊರ ಹಾಗೂ ಪರವೂರ ಸಾವಿರಾರು ಭಕ್ತರು ಆಗಮಿಸುತ್ತಿದ್ದು ಈಗಾಗಲೇ ಸಭಾವೇದಿಕೆ, ಅನ್ನ ಛತ್ರ, ಮಂಟಪ .ಅಲಂಕಾರ .ಚಪ್ಪರದ ಕೆಲಸ ಕಾರ್ಯಗಳು ಬರದಿಂದ ಸಾಗುತ್ತಿದೆ.

Related posts

ಬಂಗ್ಲೆಗುಡ್ಡಕ್ಕೆ ಮತ್ತೆ ಎಂಟ್ರಿ ಕೊಟ್ಟ ಎಸ್.ಐ.ಟಿ ಅಧಿಕಾರಿಗಳು

Suddi Udaya

ಶಿಶಿಲ: ಹೇವಾಜೆ ಶಾಲೆಯ ಹಿಂಬದಿ ಗುಡ್ಡ ಜರಿತ

Suddi Udaya

ಬೆಳ್ತಂಗಡಿ ವರ್ತಕರ ಸಂಘದಿಂದ ವೃದ್ದಾಶ್ರಮಕ್ಕೆ ಭೇಟಿ,ಗೃಹೋಪಯೋಗಿ ವಸ್ತುಗಳ ಹಸ್ತಾಂತರ

Suddi Udaya

ಎಸ್ ಡಿ ಯಂ ಆಂ.ಮಾ. ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ನಡೆಯುವ ಕರಾಟೆ ತರಬೇತಿ ವಿದ್ಯಾರ್ಥಿಗಳಿಗೆ ಬೆಲ್ಟ್ ಪ್ರಮೋಷನ್ ಪರೀಕ್ಷೆ

Suddi Udaya

ಬೆಳಾಲು: ಮುಕುತ್ತಿ ಮಜಲು ಸೇತುವೆ ನಿರ್ಮಾಣಕ್ಕೆ ಅನುದಾನ ಕಲ್ಪಿಸಿದ ಶಾಸಕ ಹರೀಶ್‌ ಪೂಂಜರಿಗೆ ಅಭಿನಂದನೆ

Suddi Udaya

ಧರ್ಮಸ್ಥಳ: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!