ಲಾಯಿಲ : ಲಾಯಿಲ ಓಡದಕರಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗೆ ಹಾಗೂ ಮನೆಗೆ ಮಳೆಯ ನೀರು ನುಗ್ಗಿದ ಘಟನೆ ಆ. 1ರಂದು ನಡೆದಿದೆ.
ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದುದರಿಂದ ತೋಡಿನ ನೀರು ಹೋಗಲಾಗದೆ ಬ್ಲಾಕ್ ಆಗಿ ಈ ಘಟನೆ ಸಂಭವಿಸಿತು. ಸುತ್ತ ಮುತ್ತಲಿನ ತೋಟವೆಲ್ಲಾ ನೀರಿನಿಂದ ಆವೃತವಾಗಿತ್ತು. ಮೊದಲು ಕೂಡಾ ದೇವಸ್ಥಾನದ ಸಮೀಪವಿರುವ ತೋಡಿನ ನೀರು ಬ್ಲಾಕ್ ಆಗಿ ನೀರು ಬಂದಿದ್ದರೂ ಮನೆಯೊಳಗೆ ಇದೇ ಪ್ರಥಮ ಬಾರಿ ಬಂದಿರುವುದಾಗಿ ಲತೇಶ್ ಓಡದಕರಿಯ ತಿಳಿಸಿದರು.













