30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಡೆಕ್ಕಾವು ಗುತ್ತುವಿನಲ್ಲಿ ಸಂಕ್ರಮಣ ಪೂಜೆ ಹಾಗೂ ಉಚಿತ ಕಣ್ಣಿನ ಪರೀಕ್ಷೆ ಮತ್ತು ಕನ್ನಡಕ ವಿತರಣೆ

ಬೆಳ್ತಂಗಡಿ: ದೈವ ಕ್ಷೇತ್ರ ಬಡೆಕ್ಕಾವು ಇಲ್ಲಿ ನಡೆದ ಸಂಕ್ರಮಣ ಪೂಜೆಯಂದು ಅಪ್ಪೆ ಕಲ್ಲುರ್ಟಿಗೆ ಮತ್ತು ಕೊರಗಜ್ಜನಿಗೆ ದೊಂದಿ ಕೋಲ ಜೊತೆಗೆ ನಾವೂರು ,ಇಂದಬೆಟ್ಟು, ನಡ ಕನ್ಯಾಡಿ ನಾಲ್ಕು ಗ್ರಾಮಗಳ 40 ವರ್ಷಕ್ಕಿಂತ ಮೇಲ್ಪಟ್ಟ ಗ್ರಾಮಸ್ಥರಿಗೆ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು.

ಪ್ರತಿಯೊಂದು ಧರ್ಮದವರನ್ನು ಸಮಾನತೆಯಿಂದ ಕಾಣುವ ದೈವ ಕ್ಷೇತ್ರವೇ ಬಡೆಕ್ಕಾವು ಗುತ್ತು ಇಲ್ಲಿ ಸೇರುವ ಪ್ರತಿಯೊಬ್ಬರೂ ಸಮಾನ ಮನಸ್ಸಿನವರು ಪ್ರತಿಯೊಂದು ಜಾತಿ ಧರ್ಮದವರಿಗೂ ಗೌರವ ನೀಡುವ ತಳವೇ ದೈವ ಕ್ಷೇತ್ರ ಬಡೆಕ್ಕಾವು
ಕೇವಲ ವೈಯಕ್ತಿಕ ಪ್ರತಿಷ್ಠೆಗೆ ಇಲ್ಲಿ ಅವಕಾಶವೇ ಇಲ್ಲ ಅದಕ್ಕೊಂದು ಸ್ಪಷ್ಟ ನಿದರ್ಶನವೇ ಕಣ್ಣಿನ ಪರೀಕ್ಷೆ ಮತ್ತು ಕನ್ನಡಕ ವಿತರಣೆ ಇದರಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಬಾಂಧವರು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಂಡಿದ್ದು ವಿಶೇಷ. ಈ ಸಂದರ್ಭದಲ್ಲಿ ಸುಮಾರು 110ಕ್ಕೂ ಹೆಚ್ಚು ಕನ್ನಡಕ ವಿತರಣೆಯಾಗಿದೆ.

ದೀಪ ಬೆಳಗಿಸಿ ಮಾತನಾಡಿದ ಡಾ| ಶಂಕರ್ ಡಿಸಿಪಿ ನವದೆಹಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದು ಹೀಗೆ ದೈವ ಕ್ಷೇತ್ರಗಳು ದೇವರು ಸಾಮೂಹಿಕಗಳ ಸಾಂಪ್ರದಾಯಿಕ ಪೂಜೆಗಳ ಜೊತೆ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ಒಂದನೇ ತರಗತಿಯಿಂದ ಪದವಿ ಪೂರ್ವ ಕಾಲೇಜಿನವರೆಗೆ ನೋಟ್ ಬುಕ್ ವಿತರಣೆ ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಕಣ್ಣಿನ ಪರೀಕ್ಷೆ ಹಾಗೂ ಕನ್ನಡಕ ವಿತರಣೆಯಂತ ಕಾರ್ಯಕ್ರಮಗಳನ್ನು ನಡೆಸುವುದು ಸಾಧಾರಣದ ಕೆಲಸವಲ್ಲ ದೈವ ಕ್ಷೇತ್ರದ ಇಂಥ ಕೆಲಸಗಳಿಗೆ ನಾವೆಲ್ಲರೂ ಸಹಕರಿಸಬೇಕೆ ಹೊರತು ಅನಗತ್ಯ ತಪ್ಪನ್ನು ಹುಡುಕಿ ದೈವ ಕ್ಷೇತ್ರದ ಹೆಸರನ್ನು ಕೆಡಿಸುವ ಹುನ್ನಾರ ನಡೆಸಬಾರದು ಎಂದರು.

ಮುಖ್ಯ ಅತಿಥಿಗಳಲ್ಲಿ ಖ್ಯಾತ ನೇತ್ರ ತಜ್ಞರಾದ ಡಾ! ಶರತ್ ಕುಮಾರ್ ದಾವಣಗೆರೆ, ಪ್ರದೀಪ್ ಆಚಾರ್ಯ ಬೆಂಗಳೂರು,
ಶಾಂತಿಪ್ರಸಾದ್ ಮೇರೆಲ್ದೊಟ್ಟು, ಬಂಟ್ವಾಳ ರವಿರಾಜ್ ಜೈನ್ ಬಡೆಕ್ಕಾವು, ಸುರೇಶ್ ಇಂಚರ, ದಿನೇಶ್ ಪ್ರಭು ನಾವೂರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಚಿಗುರು ಕನಸು ಮೆಲೋಡೀಸ್ ಉಜಿರೆ ಈ ತಂಡದವರಿಂದ ದೈವ ದೇವರುಗಳ ಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಿತು . ದೈವ ಕ್ಷೇತ್ರದ ವತಿಯಿಂದ ನಡೆಯುವ ಈ ಕಾರ್ಯಕ್ರಮದ ಮುಖ್ಯಸ್ಥ ರಕ್ಷಿತ್ ಅಜಿಲ ರವರು ಎಲ್ಲರನ್ನೂ ಅಭಿನಂದಿಸುವುದರ ಜೊತೆಗೆ ಎಲ್ಲಾ ಗಾಯಕರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

Related posts

ಬೆಳ್ತಂಗಡಿ ಡಿ.ಕೆ. ಆರ್.ಡಿ.ಎಸ್ ನಿಂದ ಪೌಷ್ಟಿಕ ಆಹಾರ ಮಾಹಿತಿ, ಪ್ರಾತ್ಯಕ್ಷಿಕೆ ಹಾಗೂ ಗುರುವಂದನಾ ಕಾರ್ಯಕ್ರಮ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಗೂಡ್ಸ್ ವಾಹನ ಪಲ್ಟಿ

Suddi Udaya

ಜೂ. 24: ಕೊಕ್ಕಡ ಮತ್ತು ಪಟ್ರಮೆಯಲ್ಲಿ ಜನರ ಬಳಿಗೆ -ತಾಲೂಕು ಆಡಳಿತ ಪಂಚಾಯತ್ ಮಟ್ಟದ ಜನಸ್ಪಂದನ ಕಾರ್ಯಕ್ರಮ

Suddi Udaya

ಕೊಕ್ಕಡದಲ್ಲಿ ಪರಿಸರ ಮಾಹಿತಿ ಮತ್ತು ಗಿಡ ನೆಡುವ ಕಾರ್ಯಕ್ರಮ

Suddi Udaya

ಜೆಸಿಐ ಮಧ್ಯಂತರ ಸಮ್ಮೇಳನದಲ್ಲಿ ಉಜಿರೆ ಜೆಸಿಐ ಸಿಟಿಗೆ ಹೊಸ ಘಟಕ ಔಟ್ ಸ್ಟ್ಯಾಂಡಿಂಗ್ ವಿನ್ನರ್ ಅವಾರ್ಡ್ ನೊಂದಿಗೆ ಹಲವು ಮನ್ನಣೆಗಳು

Suddi Udaya

ಮಾಲಾಡಿ: ಕೊಲ್ಪದಬೈಲುನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು

Suddi Udaya
error: Content is protected !!