ಬೆಳ್ತಂಗಡಿ: ದೈವ ಕ್ಷೇತ್ರ ಬಡೆಕ್ಕಾವು ಇಲ್ಲಿ ನಡೆದ ಸಂಕ್ರಮಣ ಪೂಜೆಯಂದು ಅಪ್ಪೆ ಕಲ್ಲುರ್ಟಿಗೆ ಮತ್ತು ಕೊರಗಜ್ಜನಿಗೆ ದೊಂದಿ ಕೋಲ ಜೊತೆಗೆ ನಾವೂರು ,ಇಂದಬೆಟ್ಟು, ನಡ ಕನ್ಯಾಡಿ ನಾಲ್ಕು ಗ್ರಾಮಗಳ 40 ವರ್ಷಕ್ಕಿಂತ ಮೇಲ್ಪಟ್ಟ ಗ್ರಾಮಸ್ಥರಿಗೆ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು.

ಪ್ರತಿಯೊಂದು ಧರ್ಮದವರನ್ನು ಸಮಾನತೆಯಿಂದ ಕಾಣುವ ದೈವ ಕ್ಷೇತ್ರವೇ ಬಡೆಕ್ಕಾವು ಗುತ್ತು ಇಲ್ಲಿ ಸೇರುವ ಪ್ರತಿಯೊಬ್ಬರೂ ಸಮಾನ ಮನಸ್ಸಿನವರು ಪ್ರತಿಯೊಂದು ಜಾತಿ ಧರ್ಮದವರಿಗೂ ಗೌರವ ನೀಡುವ ತಳವೇ ದೈವ ಕ್ಷೇತ್ರ ಬಡೆಕ್ಕಾವು
ಕೇವಲ ವೈಯಕ್ತಿಕ ಪ್ರತಿಷ್ಠೆಗೆ ಇಲ್ಲಿ ಅವಕಾಶವೇ ಇಲ್ಲ ಅದಕ್ಕೊಂದು ಸ್ಪಷ್ಟ ನಿದರ್ಶನವೇ ಕಣ್ಣಿನ ಪರೀಕ್ಷೆ ಮತ್ತು ಕನ್ನಡಕ ವಿತರಣೆ ಇದರಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಬಾಂಧವರು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಂಡಿದ್ದು ವಿಶೇಷ. ಈ ಸಂದರ್ಭದಲ್ಲಿ ಸುಮಾರು 110ಕ್ಕೂ ಹೆಚ್ಚು ಕನ್ನಡಕ ವಿತರಣೆಯಾಗಿದೆ.
ದೀಪ ಬೆಳಗಿಸಿ ಮಾತನಾಡಿದ ಡಾ| ಶಂಕರ್ ಡಿಸಿಪಿ ನವದೆಹಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದು ಹೀಗೆ ದೈವ ಕ್ಷೇತ್ರಗಳು ದೇವರು ಸಾಮೂಹಿಕಗಳ ಸಾಂಪ್ರದಾಯಿಕ ಪೂಜೆಗಳ ಜೊತೆ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ಒಂದನೇ ತರಗತಿಯಿಂದ ಪದವಿ ಪೂರ್ವ ಕಾಲೇಜಿನವರೆಗೆ ನೋಟ್ ಬುಕ್ ವಿತರಣೆ ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಕಣ್ಣಿನ ಪರೀಕ್ಷೆ ಹಾಗೂ ಕನ್ನಡಕ ವಿತರಣೆಯಂತ ಕಾರ್ಯಕ್ರಮಗಳನ್ನು ನಡೆಸುವುದು ಸಾಧಾರಣದ ಕೆಲಸವಲ್ಲ ದೈವ ಕ್ಷೇತ್ರದ ಇಂಥ ಕೆಲಸಗಳಿಗೆ ನಾವೆಲ್ಲರೂ ಸಹಕರಿಸಬೇಕೆ ಹೊರತು ಅನಗತ್ಯ ತಪ್ಪನ್ನು ಹುಡುಕಿ ದೈವ ಕ್ಷೇತ್ರದ ಹೆಸರನ್ನು ಕೆಡಿಸುವ ಹುನ್ನಾರ ನಡೆಸಬಾರದು ಎಂದರು.
ಮುಖ್ಯ ಅತಿಥಿಗಳಲ್ಲಿ ಖ್ಯಾತ ನೇತ್ರ ತಜ್ಞರಾದ ಡಾ! ಶರತ್ ಕುಮಾರ್ ದಾವಣಗೆರೆ, ಪ್ರದೀಪ್ ಆಚಾರ್ಯ ಬೆಂಗಳೂರು,
ಶಾಂತಿಪ್ರಸಾದ್ ಮೇರೆಲ್ದೊಟ್ಟು, ಬಂಟ್ವಾಳ ರವಿರಾಜ್ ಜೈನ್ ಬಡೆಕ್ಕಾವು, ಸುರೇಶ್ ಇಂಚರ, ದಿನೇಶ್ ಪ್ರಭು ನಾವೂರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಚಿಗುರು ಕನಸು ಮೆಲೋಡೀಸ್ ಉಜಿರೆ ಈ ತಂಡದವರಿಂದ ದೈವ ದೇವರುಗಳ ಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಿತು . ದೈವ ಕ್ಷೇತ್ರದ ವತಿಯಿಂದ ನಡೆಯುವ ಈ ಕಾರ್ಯಕ್ರಮದ ಮುಖ್ಯಸ್ಥ ರಕ್ಷಿತ್ ಅಜಿಲ ರವರು ಎಲ್ಲರನ್ನೂ ಅಭಿನಂದಿಸುವುದರ ಜೊತೆಗೆ ಎಲ್ಲಾ ಗಾಯಕರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.











