ಬೆಳ್ತಂಗಡಿ: ಸುರೇಖಾ ಅವರು ಅವರು ತ್ರಿವರ್ಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ (ರಿ) ಇದರಲ್ಲಿ ಬ್ಯಾಂಕ್ ಕರೆಸ್ಪಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸೇವೆಯಿಂದ ಗ್ರಾಮದಲ್ಲಿನ ಜನರಿಗೆ ಬ್ಯಾಂಕಿಂಗ್ ಸೇವೆಗಳು ಸುಲಭವಾಗಿ ಹಾಗೂ ತ್ವರಿತವಾಗಿ ಲಭ್ಯವಾಗಿದೆ.

ಗ್ರಾಮದ ವೃದ್ಧರು ಮಹಿಳೆಯರು ರೈತರು ಹಾಗೂ ಕೂಲಿ ಕಾರ್ಮಿಕರು, ಬ್ಯಾಂಕ್ಗೆ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಬಹಳಷ್ಟು ಕಡಿಮೆಯಾಗಿದೆ. ಹಣ ಠೇವಣಿ, ಹಣ ಹಿಂಪಡೆಯುವುದು ಆಧಾರ್ ಆಧಾರಿತ ವಹಿವಾಟು, ಖಾತೆ ತೆರೆಯುವುದು, ಸರ್ಕಾರಿ ಯೋಜನೆಗಳ ಹಣ ವಿತರಣೆ ಹಾಗೂ ಇತರ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಮದಲ್ಲಿಯೇ ಒದಗಿಸುವ ಮೂಲಕ ಜನರ ಸಮಯ ಮತ್ತು ವೆಚ್ಚ ಉಳಿತಾಯವಾಗುತ್ತಿದೆ. ಸುರೇಖಾ ಅವರ ನಿರಂತರ ಸೇವೆಯಿಂದ ಗ್ರಾಮದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಜಾಗೃತಿ ಹೆಚ್ಚಿದ್ದು ನಗದು ರಹಿತ ವ್ಯವಹಾರಗಳ ಬಳಕೆಯ ವೃದ್ಧಿ ಮತ್ತು ಬ್ಯಾಂಕ್ ರಜಾ ದಿನಗಳಲ್ಲೂ ಸೇವೆ ಸಲ್ಲಿಸುವುದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ವಿಶೇಷವಾಗಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ಹಿರಿಯ ನಾಗರಿಕರು ಈ ಸೇವೆಯಿಂದ ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ.
ಪ್ರಸ್ತುತ ಇವರ ಸೇವೆಯಾದ ಗ್ರಾಮದಲ್ಲಿ1300ಕ್ಕೂ ಹೆಚ್ಚು ಕುಟುಂಬಗಳು ಬ್ಯಾಂಕಿಂಗ್ ಸೌಲಭ್ಯವನ್ನು ಪಡೆದುಕೊಂಡಿದ್ದು ಪ್ರತಿದಿನ ಸರಾಸರಿ 5 ಲಕ್ಷ ವಹಿವಾಟುಗಳು ನಡೆಯುತ್ತಿವೆ. ಜನರ ವಿಶ್ವಾಸಗಳಿಸಿರುವ ಸುರೇಖಾ ಅವರ ಕಾರ್ಯ ಗ್ರಾಮೀಣ ಆರ್ಥಿಕ ಸಬಲೀಕರಣಕ್ಕೆ ಉತ್ತಮ ಮಾದರಿಯಾಗಿದೆ.













