ಬೆಳ್ತಂಗಡಿ: ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ ಎಂಟು ಅರ್ಹ ಫಲಾನುಭವಿಗಳಿಗೆ 47,000 ರೂಪಾಯಿಗಳ ಧನಸಹಾಯವನ್ನು ಊರಿನ ಗಣ್ಯ ಅತಿಥಿಗಳ ಸಮಕ್ಷಮದಲ್ಲಿ ನೀಡಿದರು.
ಇದರಲ್ಲಿ ಆರು ವಿದ್ಯಾರ್ಥಿಗಳಿಗೆ ರೂ. 5000 ದಂತೆ ಶೈಕ್ಷಣಿಕ ಸಹಾಯ ಉಳಿದಂತೆ ರೂ.17000 ವನ್ನು ಸಮಾಜ ಸೇವಾ ಸಂಸ್ಥೆಗಳಿಗೆ ನೀಡಲಾಯಿತು. ಅರೆಕ್ಕಲ್ ರಾಮಚಂದ್ರ ಭಟ್, ರಾಘವೇಂದ್ರ ತಾಮನ್ಕರ್, ನಾಮದೇವ ರಾವ್ ಮತ್ತು ತಾಮನ್ಕರ್ ಬಂಧುಗಳು ಉಪಸ್ಥಿತರಿದ್ದರು. ತಾಮನ್ಕರರ ಉದಾತ್ತ ಕಾರ್ಯವು ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು.













