ನಾರಾವಿ: ಶ್ರೀ ಸೂರ್ಯ ಫ್ರೆಂಡ್ಸ್ ಮಂಚಕಲ್ಲು ಅರಸಕಟ್ಟೆ ನಾರಾವಿ ಇದರ 4ನೇ ವರ್ಷದ ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನಾರಾವಿ ಉದ್ಯಮಿ ಚಂದ್ರಶೇಖರ ಜಾರೋಡಿ ಇವರು ಆ9 ರಂದು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಂದೇಶ್ ದೇವಾಡಿಗ, ಗೌರವಾಧ್ಯಕ್ಷ ಪ್ರವೀಣ್ ದೇವಾಡಿಗ, ಗೌರವ ಸಲಹೆಗಾರ ವಸಂತ ಆಚಾರ್ಯ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.













