ಕೊಲ್ಲಿ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪೂರ್ವಭಾವಿ ಸಮಾಲೋಚನೆ ಸಭೆಯು ಆ. 11 ರಂದು ಕೊಲ್ಲಿ ದೇವಸ್ಥಾನದಲ್ಲಿ ನಡೆಯಿತು.

ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು, ಮುಂಬರುವ ಗಣೇಶೋತ್ಸವದ ಯಶಸ್ವಿ ಆಚರಣೆ ಕುರಿತು ಸಮಾಲೋಚನೆ ನಡೆಸಿದರು. ಈ ವೇಳೆ ಅಧ್ಯಕ್ಷರಾಗಿ ಕೇಶವ ವಿ ಫಡಕೆ, ಉಪಾಧ್ಯಕ್ಷರಾಗಿ ವನಿತಾ ಉಮೇಶ್ ಪೂಜಾರಿ, ಕಾರ್ಯದರ್ಶಿಯಾಗಿ ಸಂದೀಪ್ ಪೂಜಾರಿ ಬೊಳ್ಳಜೆ, ಕೋಶಾಧಿಕಾರಿಯಾಗಿ ಅಭಿಜಿತ್ ಪೂಜಾರಿ ವಳಲಬೆಟ್ಟು, ಗೌರವ ಸಲಹೆಗಾರರಾಗಿ ವಿನಯಚಂದ್ರ ನಡುಬೈಲು, ಸುರೇಶ ಪೂಜಾರಿ ಅಡ್ಡದಕರೆ, ವಿಜಯ ಪೂಜಾರಿ ಕಾಜೂರ್, ಮೋನಪ್ಪ ಗೌಡ, ಶ್ರೀನಿವಾಸ್ ರಾವ್ ಕೊಂಬಿನಡ್ಕ ಆಯ್ಕೆಯಾದರು.
ಸಮಿತಿಯ ಸದಸ್ಯ ಸ್ವಸ್ತಿಕ್ ಕಂಬಳದಡ್ಡು, ನಿತೇಶ್ ಅಡ್ಡದಕರೆ, ಪ್ರಜ್ವಲ್ ನಡ್ತಿಕಲ್, ನಿಕ್ಷಿತ್ ಕೊಲ್ಲಿ, ಸುರೇಶ ಪೂಜಾರಿ ಬನಾದಬಾಗಿಲು, ಪ್ರಶಾಂತ್ ನಡ್ತಿಕಲ್ ಸೇರಿದಂತೆ ಸಮಿತಿಯ ಎಲ್ಲಾ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.













