28.6 C
ಪುತ್ತೂರು, ಬೆಳ್ತಂಗಡಿ
August 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ: ಸದಸ್ಯರಿಗೆ ಶೇ. 9 ಡಿವಿಡೆಂಟ್

ಗೇರುಕಟ್ಟೆ : ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಆ.13ರಂದು ಸಂಘ ವಠರಾದಲ್ಲಿ ನಡೆಯಿತು.

ಸರಕಾರದ ಯೋಜನೆಗಳ ಬಗ್ಗೆ ಹಾಗೂ ಹೈನುಗಾರಿಕೆಯಲ್ಲಿ ಉತ್ತಮ ಗುಣಮಟ್ಟದ ಹಾಲು ಸಂಗ್ರಹಿಸಿ ಮತ್ತು ಹೆಚ್ಚಿನ ಲಾಭ ಪಡೆಯುವ ಬಗ್ಗೆ ಮಾಹಿತಿಯನ್ನು ದ.ಕ.ಒಕ್ಕೂಟದ ವಿಸ್ತಾರಣಾಧಿಕಾರಿ ರಾಜೇಶ್ ಪಿ.ಕಾಮತ್ ಸಂಘದ ಸದಸ್ಯರಿಗೆ ಮಾಹಿತಿ ನೀಡಿ,ಸಂಘದ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಜನಾರ್ಧನ ಗೌಡ ಕೆ.ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡುತ್ತಾ ನಮ್ಮ ಸಂಘದ ಸದಸ್ಯರು ಗುಣಮಟ್ಟದ ಹಾಲು ಪೂರೈಕೆ ಹಾಗೂ ಸಂಘದ ಪಶು ಆಹಾರವನ್ನು ಸಂಘದ ಮೂಲಕ ಸದಸ್ಯರು ಖರೀದಿ ಮಾಡುವ ಮೂಲಕ ಸಂಘವೂ ಲಾಭ ಗಳಿಸಲು ಸಾಧ್ಯವಾಯಿತು. ಸದಸ್ಯರ ಮತ್ತು ಸಿಬ್ಬಂದಿಗಳ ಸಂಪೂರ್ಣವಾದ ಸಹಕಾರದ ಅಗತ್ಯವಿದೆ ಎಲ್ಲಾ ಸದಸ್ಯರು ಇನ್ಸೂರೆನ್ಸ್ ಮಾಡಬೇಕಾಗಿ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಸಿರಿಲ್ ಪಿಂಟೋ, ನಿರ್ದೇಶಕರಾದ ಕುಶಲಾವತಿ,ಪ್ರವೀಣ ಪೂಜಾರಿ, ಕೆ.ಗಿರಿಯಪ್ಪ ಗೌಡ, ಸಿರಿಲ್ ಪಿಂಟೊ, ಕೇಶವ ಪೂಜಾರಿ, ವಸಂತ ನಾಯ್ಕ,ಯೋಗಿನಿ, ಗಂಗಯ್ಯ ಗೌಡ ಮತ್ತು ರೇಖಾ ಉಪಸ್ಥಿತರಿದ್ದರು.

ಪ್ರತಿದಿನ ಸರಾಸರಿ 2,100 ಲೀಟರ್‌‌‌ ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ ಒದಗಿಸುತ್ತಿದೆ. ಒಟ್ಟು ವ್ಯವಹಾರ 12,83,02,842.80 ಹಾಗೂ ನಿವ್ವಳ ಲಾಭ 10,27,224.83. ಸಂಘಕ್ಕೆ ಹಾಲು ಪೂರೈಕೆ ಮಾಡುವ ಸದಸ್ಯರಿಗೆ ಲಾಭಾಂಶದ ಶೇಕಡಾ 65 ನ್ನು ಬೋನಸ್ ಆಗಿ ನೀಡಲಾಯಿತು.

ಷೇರು ಡಿವಿಡೆಂಟ್ : ಸಂಘದ ಸದಸ್ಯರಿಗೆ ಶೇಕಡ 9 ಡಿವಿಡೆಂಟ್ ಸಭೆಯಲ್ಲಿ ಘೋಷಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳಿಯ, ನ್ಯಾಯತರ್ಪು ಶ್ರೀ ವರ ಮಹಾಲಕ್ಷ್ಮಿ ಪೂಜಾ ಸಮಿತಿ ವತಿಯಿಂದ ಸಂಘಕ್ಕೆ ಸ್ಪಿಕಿಂಗ್ ಸ್ಟೇಂಡ್ ಒಂದನ್ನು ನ್ಯಾಯತರ್ಪು ಪ್ರತಿನಿಧಿ ಸುಮಿತ್ರಾ, ಕಳಿಯ , ಪ್ರತಿನಿಧಿ ಸೌಮ್ಯ, ಪೂಜಾ ಸಮಿತಿ ಅಧ್ಯಕ್ಷ ಸಂಧ್ಯಾ, ನ್ಯಾಯತರ್ಪು ಒಕ್ಕೂಟದ, ಅಧ್ಯಕ್ಷ ಸಿದ್ದಪ್ಪ ಗೌಡ, ಕಳಿಯ ಒಕ್ಕೂಟದ ಅಧ್ಯಕ್ಷೆ ಸುಭಾಷಿಣಿ ಕೆ. ಪದಾಧಿಕಾರಿಗಳು ಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡುವ ಸದಸ್ಯರಾದ ಪ್ರಥಮ: ವೀರಪ್ಪ ಪೂಜಾರಿ ದಂಪತಿಗಳು, ದ್ವೀತಿಯ: ಸಂಘದ ಉಪಾಧ್ಯಕ್ಷ ಸಿರಿಲ್ ಪಿಂಟೋ ದಂಪತಿಗಳು, ತೃತೀಯ: ವಲೇರಿಯನ್ ದಂಪತಿ ಸಮೇತ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ : ಹಾಲು ಉತ್ಪಾದಕರ ಸಂಘದ ಸದಸ್ಯರ ಮಕ್ಕಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ಹತ್ತನೇ ತರಗತಿ ಮತ್ತು ಪಿಯುಸಿ ಯಲ್ಲಿ ಅಧಿಕ ಆಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸಂಘದ ಕಾರ್ಯದರ್ಶಿ ಗುಲಾಬಿ ಪಿ. ವಾರ್ಷಿಕ ಸಭೆಯಲ್ಲಿ ವಾಚಿಸಿದರು. ಸಂಘದ ಸಿಬ್ಬಂದಿಗಳಾದ ಗುಮಾಸ್ತೆ ಶಾಲಿನಿ, ಶಾಖೆ ಸಹಾಯಕ ವಿಜಯ ಕುಮಾರ್ ಕೆ., ಹಾಲು ಪರೀಕ್ಷಕ ಸಿದ್ದಪ್ಪ ಗೌಡ, ಮತ್ತು ಕೃ.ಗ.ಕಾರ್ಯಕರ್ತ ಉಮೇಶ ಗೌಡ ಬಿ. ಸಹಕರಿಸಿದರು.

ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಳಿಯ ಸಿ.ಎ.ಬ್ಯಾಂಕ್ ಸಿಬ್ಬಂದಿ ಜಗನ್ನಾಥ ಪ್ರಾರ್ಥನೆ ಹಾಡಿದರು. ಸಂಘದ ನಿರ್ದೇಶಕ ರಂಜನ್ ಹೆಚ್. ಸ್ವಾಗತಿಸಿ, ಸಂಘದ ಸದಸ್ಯ ಉಮೇಶ್ ಕೇಲ್ದಡ್ಕ ಕಾರ್ಯ ನಿರೂಪಿಸಿದರು.
ಸಂಘದ ನಿರ್ದೇಶಕ ನೇವಿಲ್ ಸ್ಟೀವನ್ ಮೋರಸ್ ವಂದಿಸಿದರು.

Related posts

ಶಿರ್ಲಾಲು ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ದ.ಕ ಜಿಲ್ಲಾ ಎಂಆರ್‌ಡಬ್ಲ್ಯೂ , ವಿಆರ್‌ಡಬ್ಲ್ಯೂ , ಯುಆರ್‌ಡಬ್ಲ್ಯೂ ವಿಕಲಚೇತನರ ಗೌರವಧನದ ಕಾರ್ಯಕರ್ತರ ಸಂಘ ರಚನೆ

Suddi Udaya

ಕನ್ಯಾಡಿಯ 11ನೇ ವರ್ಷದ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬಂದಾರು, ಮೊಗ್ರು ಶಕ್ತಿ ಕೇಂದ್ರದ ಭಾಜಪ ಕಾರ್ಯಕರ್ತರ ಅಭ್ಯಾಸವರ್ಗ ಕಾರ್ಯಕ್ರಮ

Suddi Udaya

ಮೈಟ್ ಇಂಜಿನಿಯರಿಂಗ್ ಕಾಲೇಜಿನಿಂದ ಬಳಂಜ ಶಾಲೆಗೆ ಕಂಪ್ಯೂಟರ್ ಕೊಡುಗೆ

Suddi Udaya

ವಸಂತಿ ಟಿ. ನಿಡ್ಲೆ ರವರು ಆಲ್ ಇಂಡಿಯಾ ವಿಮೆನ್ ಅಚೀವರ್-2023 ಪ್ರಶಸ್ತಿಗೆ ಆಯ್ಕೆ

Suddi Udaya
error: Content is protected !!