ಗುರುವಾಯನಕೆರೆ: ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಕುವೆಟ್ಟುನಲ್ಲಿ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕುವೆಟ್ಟು ಗ್ರಾಮ ಪಂಚಾಯತ್ ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ಧ್ವಜಾರೋಹಣ ನೆರವೇರಿಸಿ ಶುಭ ಕೋರಿದರು.
ಈ ಸಂಧರ್ಭ ದಲ್ಲಿ ಗ್ರಾಮ ಪಂಚಾಯತ್ ಸಿಬಂದಿಗಳು, ಸ್ವಚ್ಛತಾ ಸಿಬಂದಿಗಳು, ಮಾಜಿ ಜಿ. ಪ ಸದಸ್ಯೆ ಶ್ರೀಮತಿ ಮಮತಾ ಎಂ ಶೆಟ್ಟಿ, ಮಾಜಿ ತಾ. ಪ ಸದಸ್ಯರಾದ ಪ್ರಭಾಕರ್ ಶೆಟ್ಟಿ ಉಪ್ಪಡ್ಕ, ಮಾಜಿ ಗ್ರಾ. ಪಂ ಸದಸ್ಯ ಮಂಜುನಾಥ್ ಕುಂಬ್ಳೆ, ಸಂಜೀವಿನಿ ಒಕ್ಕೂಟ ಸದಸ್ಯರು,ಪಂಚಾಯತ್ ಗ್ರಂಥಾಲಯ ಪಾಲಕರು, ಹಾಗು ಸ್ಥಳೀಯ ಶಾಲಾ ಮಕ್ಕಳು, ಎಸ್ ಡಿ ಎಂ ಸಿ ಅಧ್ಯಕ್ಷರು, ಮುಖ್ಯ್ಯೋಪಾಧ್ಯಾಯರು, ಶಿಕ್ಷಕರು ಉಪಸ್ಥಿತರಿದ್ದರು. ಪಂಚಾಯತ್ ಸಿಬಂದಿ ಆನಂದ್ ಕೋಟ್ಯಾನ್ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ವಿತ್ತರು.












