ಬೆಳ್ತಂಗಡಿ: ಬಡಗಕಾರಂದೂರು ಅಂಗನವಾಡಿ ಕೇಂದ್ರದ 1995ನೇ ಬ್ಯಾಚ್ ನ ವಿದ್ಯಾರ್ಥಿ ಸಂದೀಪ್ ಸುಂದರ್ ನೀರಲ್ಕೆರವರ ವೈಯಕ್ತಿಕ ನೆಲೆಯಲ್ಲಿ ಬಡಗಕಾರಂದೂರು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮವು ಸ್ವಾತಂತ್ರ್ಯ ದಿನಾಚರಣೆಯಂದು ಜರುಗಿತು.
ಬಡಗಕಾರಂದೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಮಂಗಳಾ ಕೆ ಹಾಗೂ ಅಂಗನವಾಡಿ ಶಿಕ್ಷಕಿ ಶ್ರೀಮತಿ ವನಿತಾ,ಶ್ರೀಮತಿ ಚೇತನಾ ಸಂದೀಪ್,ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆ ಶ್ರೀಮತಿ ಗೀತಾ,ಆಶಾ ಕಾರ್ಯಕರ್ತೆ ಶ್ರೀಮತಿ ಶಾರದಾ ಶೆಟ್ಟಿ,ಅಂಗನವಾಡಿ ಸಿಬ್ಬಂದಿ ಶ್ರೀಮತಿ ರಾಜೀವಿ ಹಾಗೂ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಅಂಗನವಾಡಿ ಕೇಂದ್ರದ ವತಿಯಿಂದ ಶ್ರೀಮತಿ ಚೇತನಾ ಸಂದೀಪ್ ರವರನ್ನು ಗೌರವಿಸಲಾಯಿತು.












