ಬೆಳ್ತಂಗಡಿ, ಆ.15: 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ವಿವಿಧೆಡೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಟಿ.ಬಿ. ಕ್ರಾಸ್, ಗುರುವಾಯನಕೆರೆ ಹಾಗೂ ವೇಣೂರು ವ್ಯಾಪ್ತಿಯಲ್ಲಿ ಎಸ್ಡಿಟಿಯು ಆಟೋ ಯೂನಿಯನ್ ವತಿಯಿಂದ ಧ್ವಜಾರೋಹಣ ನೆರವೇರಿಸಲಾಯಿತು. “ಸ್ವಾತಂತ್ರ್ಯ ಸಶಕ್ತವಾಗಲಿ, ಕಾರ್ಮಿಕನ ಕನಸು ನನಸಾಗಲಿ” ಎಂಬ ಸಂದೇಶದೊಂದಿಗೆ ನಡೆದ ಕಾರ್ಯಕ್ರಮಗಳಲ್ಲಿ ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನಬದ್ಧ ಹಕ್ಕುಗಳು ಹಾಗೂ ಸಮಾನತೆಯ ಮಹತ್ವವನ್ನು ಸಾರಲಾಯಿತು.

ಕಾರ್ಯಕ್ರಮಗಳಲ್ಲಿ ಎಸ್ಡಿಟಿಯು ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಹನೀಫ್ ಟಿ.ಎಸ್., ಜಿಲ್ಲಾ ಸದಸ್ಯ ಮಾರ್ಟಿನ್, ಎಸ್ಡಿಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷ ಆರೀಫ್ ಉಜಿರೆ, ತಾಲೂಕು ಉಪಾಧ್ಯಕ್ಷ ಬಶೀರ್ ಅತ್ತಾಜೆ, ಕೋಶಾಧಿಕಾರಿ ಅಬ್ದುಲ್ಲಾ ಜಿ.ಕೆ., ಆಟೋ ಯೂನಿಯನ್ ಅಧ್ಯಕ್ಷ ಸಲೀಂ ಕುಂಟಿನಿ, ಹೈದರ್ ಜಿ.ಕೆ., ನವಾಝ್ ವೇಣೂರು, ಯೂನಿಯನ್ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.













