ತ್ಯಾಗ, ಬಲಿದಾನ ಗಳ ಫಲವಾಗಿ ಸಮ್ಮ ಹಿರಿಯರ ನಡಿಗೆಯಿಂದಾಗಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂಬುದಾಗಿಸುಂದರ ಪೂಜಾರಿ, ನಿವೃತ್ತ ಜಂಟಿ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಇಲಾಖೆ,ಯವರು ಕರ್ನಾಟಕ ನಿವೃತ್ತ ನೌಕರರ ಸಂಘ ಬೆಳ್ತಂಗಡಿ ಯವರೇ ವತಿಯಿಂದ ಸ್ವಂತ ಕಟ್ಟಡ ‘ಪ್ರಬುದ್ಧ’ ದಲ್ಲಿ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.
ತೆರೆಸಾ ಮಿರಾಂಡ. ಹಿರಿಯ ಸದಸ್ಯರು, ಮಾಜಿ ನಗರಸಭಾ ಅಧ್ಯಕ್ಷರು ಶುಭಾಶಯದ ನುಡಿಗಳನ್ನಾಡಿದರು. ಕಾರ್ಯಕ್ರಮಕ್ಕೆ ಧ್ವಜಸ್ತಂಭ ಹಾಗೂ ತಿರಂಗವನ್ನು ನಾವೂರು ನಿವೃತ್ತ ಮುಖ್ಯ ಶಿಕ್ಷಕ ಎನ್. ಬಾಲಕೃಷ್ಣ ಶೆಟ್ಟಿ ಕೊಡುಗೆಯಾಗಿ ನೀಡಿದರು. ಸಿಹಿತಿಂಡಿ ವಿತರಿಸಿದ ತೆರೇಸಾ ಮಿರಾಂಡ ಹಾಗೂ ಆಗಮಿಸಿದ ಸರ್ವರಿಗೂ ಅಧ್ಯಕ್ಷ ವಿಠ್ಠಲ ಶೆಟ್ಟಿ ಧನ್ಯವಾದ ಅರ್ಪಿಸಿದರು.
ಕಾರ್ಯದರ್ಶಿ ಶ್ರೀ ವಿಶ್ವಾಸ್ ರಾವ್, ಕೋಶಾಧಿಕಾರಿ ಶ್ರೀ ಜಗನ್ನಿವಾಸ ರಾವ್, ಉಪಾಧ್ಯಕ್ಷೆ ಶ್ರೀಮತಿ ಕುಸುಮಾವತಿ ಸದಸ್ಯರಾದ ಶ್ರೀ ಆನಂದ ಶೆಟ್ಟಿ, ಶ್ರೀ ಪದ್ಮಕುಮಾರ್, ಶ್ರೀ ಶಂಭು ಶರ್ಮಾ, ಶ್ರೀ ಅಣ್ಣಿ ಗೌಡ ಪುಷ್ಪಗಿರಿ, ಶ್ರೀ ಮಂಜಪ್ಪ ಸಪಲ್ಯ ಶ್ರೀ ಸುರೇಂದ್ರ ಬಂಗೇರ ಮುಂತಾದವರು ಉಪಸ್ಥಿತರಿದ್ದರು.












