ಮಂಗಳೂರು: ಯಂಗ್ ಡೆಮಾಕ್ರಟ್ಸ್ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಘಟನಾ ಸಮಿತಿ ಆಯ್ಕೆ ಮಂಗಳೂರು ಪುರಭವನದಲ್ಲಿ ನಡೆಯಿತು.
ನೂತನ ಕನ್ವೀನರ್ ಆಗಿ ನ್ಯಾಯವಾದಿ ಅಸ್ಮಾ ಬೆಳ್ತಂಗಡಿ ಹಾಗೂ ಜಾಯಿಂಟ್ ಕನ್ವೀನರ್ ಆಗಿ ತೌಸಿಫ್ ಕಕ್ಕಿಂಜೆ, ಶಾಕಿರ್ ರಹ್ಮಾನ್ ಮತ್ತು ಭುವನೇಶ್ ಬಂಟ್ವಾಳ ಆಯ್ಕೆಯಾಗಿದ್ದಾರೆ.

ಸಮಿತಿ ಸದಸ್ಯರಾಗಿ ನ್ಯಾಯವಾದಿ ಮುಫೀದಾ ಶಂಶುದ್ದೀನ್, ಮಂಜುನಾಥ್ ಸವಣೂರು, ಶಾಕಿರ್ ಪಾಂಡವರಕಲ್ಲು, ಶಝ್ಮಾ ಫಾತಿಮಾ, ತನ್ವೀರ್ ವಿಟ್ಲ, ಸುಂದಿತಾ ಪುಂಜಾಲಕಟ್ಟೆ, ಹಮೀದ್ ಪುತ್ತೂರು, ಹಮ್ದಾ ಮೆಲ್ಕಾರ್ ಹಾಗೂ ಝಾಹಿದ್ ಬೆಳ್ತಂಗಡಿ ಆಯ್ಕೆಯಾಗಿದ್ದಾರೆ.












