ಬೆಳ್ತಂಗಡಿ : 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶಿಶಿಲ ಯುವಕರಿಂದ ಅಂಗನವಾಡಿ ಮಕ್ಕಳಿಗೆ ಸ್ಲೇಟ್ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸಲಾಯಿತು.
ಯುವಕರಾದ ಕಾರ್ತಿಕ್ ಬದ್ರಿಜಾಲು, ರಂಜನ್ ದೇವಸ, ರಾಜ್ ಕಿಶೋರ್ ಪಡ್ಪು ರವರು ಹೇವಾಜೆ ಶಾಲೆ, ಕೊಳಕ್ಕೆಬೈಲು ಶಾಲೆ, ಕಾಲೋನಿ ಆಶ್ರಮ ಶಾಲೆ, ಶಿಶಿಲ ಶಾಲೆಯ ಮಕ್ಕಳಿಗೆ ಪುಸ್ತಕ ಹಾಗೂ ನಾಲ್ಕು ಅಂಗನವಾಡಿಗಳಿಗೆ ಸ್ಲೇಟ್ ನ್ನು ವಿತರಿಸಿದರು. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದರು.












