ಗೇರುಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಗೇರುಕಟ್ಟೆಯ ಸರಕಾರಿ ಶಾಲೆಯನ್ನು ಒಂದರಿಂದ ಪಿಯುಸಿ ತನಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ ಮಾಡಿದ ಶಾಸಕ ಹರೀಶ್ ಪೂಂಜಾರವರಿಗೆ ಅವರ ಮನೆಯ ಮಿಥಿಲಾ ನಿವಾಸದಲ್ಲಿ ಆ 17ರಂದು ಸನ್ಮಾನಿಸಲಾಯಿತು.
ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಗ್ರಾಮ ಮಟ್ಟದಲ್ಲಿಯೇ ಒದಗಿಸುವ ಉದ್ದೇಶದಿಂದ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ಗಳಾಗಿ ಮೇಲ್ದರ್ಜೆಗೇರಿಸಲು ನಿರಂತರ ಪ್ರಯತ್ನ ಮಾಡಲಾಗಿತ್ತು. ಸರ್ಕಾರದ ಈ ಆದೇಶದಿಂದ ವಿದ್ಯಾರ್ಥಿಗಳಿಗೆ ಒಂದೇ ಆವರಣದಲ್ಲಿ ಸಮಗ್ರ ಶಿಕ್ಷಣ ಸೌಲಭ್ಯ ಉತ್ತಮ ಶೈಕ್ಷಣಿಕ ವಾತಾವರಣ ಹಾಗೂ ಭವಿಷ್ಯಕ್ಕೆ ಪೂರಕವಾದ ಅವಕಾಶಗಳು ದೊರೆಯಲಿವೆ. ಇದನ್ನು ಕಾಪಾಡಿಕೊಂಡು ಬರುವ ಜವಾಬ್ದಾರಿ ನಿಮಗೆ ಎಂದು ಶಾಸಕರು ತಿಳಿಸಿದ್ದರು.
ಈ ಸಂದರ್ಭದಲ್ಲಿ ಪಿಯುಸಿ ವಿಭಾಗದ ಎಸ್ ಡಿ ಎಂ ಸಿ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಬಿರ್ಮೊಟ್ಟು, ಪ್ರಭಾರ ಪ್ರಾಂಶುಪಾಲರಾದ ಭ್ರಮರಾಂಬಿಕೆ, ಸ್ಥಳೀಯರಾದ ಕರುಣಾಕರ ಕೊರಂಜ, ಹರೀಶ್ ಗೌಡ ಸಂಬೋಳ್ಯ, ಲೋಕಿತ್ ಬಲ್ಲಿದಡ್ಡ, ಉದಿತ್ ಕುಮಾರ್ ಬರಾಯ , ಗಣೇಶ್ ಕೆ . ಬಿ. ರೋಡ್, ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಜ್ಯೋತಿ, ಶಿಕ್ಷಕ ಅಜಿತ್ ಕುಮಾರ್, ದಿನೇಶ್, ರಮ್ಯ, ಪ್ರೌಢ ಶಾಲೆಯ ಎಸ್ಡಿ ಎಂಸಿ ಉಪಾಧ್ಯಕ್ಷ ಗೋಪಾಲ್ ಗೌಡ ಮುದ್ದುಂಜ, ಸದಸ್ಯರಾದ ಜ್ಯೋತಿ, ರಾಜೇಶ್, ಪವಿತ್ರ, ಉಪಸ್ಥಿತರಿದ್ದರು.












