ಬೆಳ್ತಂಗಡಿ: ಕಾರ್ಕಳ-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಸಿಕಟ್ಟೆ ಎಂಬಲ್ಲಿ ರಸ್ತೆಯಲ್ಲಿ ಬೃಹತ್ ಹೊಂಡಗುಂಡಿಗಳು ಉಂಟಾಗಿದ್ದು,ವಾಹನ ಸವಾರರಿಗೆ ಮರಣಗುಂಡಿಗಳಾಗಿ ಪರಿವರ್ತನೆ ಆಗಿತ್ತು. ಈಗಾಗಲೇ ಇಲ್ಲಿ ಅನೇಕ ವಾಹನ ಸವಾರರಿಗೆ ಅಪಘಾತ ಉಂಟಾಗಿ ಗಾಯಗೊಂಡಿರುತ್ತಾರೆ. ಅದರಲ್ಲೂ ಪ್ರವಾಸಿಗರು ರಾತ್ರಿ ವೇಳೆಯಲ್ಲಿ ಇಲ್ಲಿ ಹೊಂಡಗುಂಡಿಗಳು ಇರುವುದನ್ನು ತಿಳಿಯದೇ ವೇಗವಾಗಿ ವಾಹನ ಚಲಾಯಿಸುವುದರಿಂದ ಈ ಹಿಂದೆ ಅನೇಕ ಅಪಘಾತಗಳು ಸಂಭವಿಸಿವೆ. ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇದೀಗ ಆ.18ರಂದು ರಿಕ್ಷಾ ಚಾಲಕರು ಹಾಗೂ ಸ್ಥಳೀಯರು ತಮ್ಮ ವೈಯಕ್ತಿಕ ವೆಚ್ಚದಲ್ಲಿ ಶ್ರಮದಾನದ ಮೂಲಕ ಹೊಂಡ-ಗುಂಡಿಗಳನ್ನು ಮುಚ್ಚಿ ವಾಹನ ಸವಾರರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಶ್ರಮದಾನದಲ್ಲಿ ರಿಕ್ಷಾ ಚಾಲಕರಾದ ಲಕ್ಷ್ಮಣ್, ಸತೀಶ್ ಜೈನ್, ಸಂತೋಷ್, ಸ್ಥಳೀಯರಾದ ಲಿಂಗಪ್ಪ ಮಲೆಕುಡಿಯ, ಪಾರ್ಶ್ವನಾಥ ಜೈನ್, ರವೀಶ್, ಪ್ರಜ್ಞೇಶ್ ಕುತ್ಲೂರು ಭಾಗವಹಿಸಿದ್ದರು.












