ಬೆಳ್ತಂಗಡಿ: ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಕ್ಕೆನೇಜಿ ಎಂಬಲ್ಲಿ ದಿನಸಿ ಅಂಗಡಿಯಲ್ಲಿ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡ ಘಟನೆ ಆ.19 ರಂದು ನಡೆದಿದೆ.

ಕಕ್ಕೆನೇಜಿ ವಾಸುದೇವ ರಾವ್ರ ಅಂಗಡಿಗೆಯೊಳಗೆ ಮಧ್ಯಾಹ್ನ ವೇಳೆ ಸೇರಿಕೊಂಡ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಲಾಯಿಲದ ಸ್ನೇಕ್ ಅಶೋಕ್ ಅವರು ಸೆರೆ ಹಿಡಿದು ಅರಣ್ಯಕ್ಕೆ ಸೇರಿಸಿದ್ದಾರೆ. ಹಾವಿನ ರಕ್ಷಣ ಕಾರ್ಯಾಚರಣೆಯ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಸಲಾಗಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.












