ಬೆಳ್ತಂಗಡಿ: ಮಂಗಳೂರು ಡಿ ಸಿಸಿ ಬ್ಯಾಂಕ್ ಮಹಾಸಭೆಯಲ್ಲಿ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ‘ತಾಲೂಕಿನ ಅತ್ಯುತ್ತಮ ಸಹಕಾರಿ ಸಂಘ ‘ಪ್ರಶಸ್ತಿ ಲಭಿಸಿದೆ.
ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್, ಮುಖ್ಯಕಾರ್ಯನಿರ್ವಹಣಾ ಧಿಕಾರಿ ದಯಾನಂದ ಶೆಟ್ಟಿಗಾರ್ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ವಿನಯಚಂದ್ರ, ಶೀನಪ್ಪ ಗೌಡ, ರಘುನಾಥ, ಪ್ರಮೋದ್, ಸಹಾಯಕ ಮುಖ್ಯಕಾರ್ಯನಿರ್ವಹಣಾಧಿಕಾ ರಿ ಬಾಲಕೃಷ್ಣ ನಾಯ್ಕ್ , ಸಿಬಂದಿ ರಮಾನಂದ ಉಪಸ್ಥಿತರಿದ್ದರು.











