ವೇಣೂರು : ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ವೇಣೂರು ವತಿಯಿಂದ ಬೆಸ್ಟ್ ಶಾಸಕ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಗೌರವಾರ್ಪಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ಕೆ ವಿಜಯ ಗೌಡ ವೇಣೂರು, ಕಾರ್ಯದರ್ಶಿ ಯೋಗೀಶ್ ಬಿಕ್ರೊಟ್ಟು, ಕೋಶಾಧಿಕಾರಿ ಪ್ರಶಾಂತ್ ಹೆಗಡೆ, ಕುಂಟೊಲ್ ಮಾರ್ ಸೇವಾ ಸಮಿತಿಯ ಅಧ್ಯಕ್ಷರಾದ ಸುಧೀರ್ ಭಂಡಾರಿ, ಮಹಿಳಾ ಸಮಿತಿಯ ಅಧ್ಯಕ್ಷೆ ಸಂಭಾಷಿಣಿ ಉದಯಕುಮಾರ್ ಹಾಗೂ ಫೌಂಡರ್ ಟ್ರಸ್ಟಿಗಳು, ಸೇವಾ ಸಮಿತಿಯ ಹಾಗೂ ಮಹಿಳಾ ಸಮಿತಿಯ ಕಾರ್ಯಕಾರಿ ಸದಸ್ಯರು ಮತ್ತು ಯುವ ಸೇವಾ ಸಂಗಮದ ಸದಸ್ಯರು ಭಾಗವಹಿಸಿದರು.











