ನಡ: ಇಲ್ಲಿಯ ಕನ್ಯಾಡಿ-1 ಗ್ರಾಮದ ವತಿಯಿಂದ ನಡೆಯುವ 40ನೇ ವರ್ಷದ ಸಾರ್ವ ಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ನಡ ಸಮಾಜ ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.

ಆಮಂತ್ರಣ ಪತ್ರಿಕೆಯನ್ನು ಸಮಿತಿಯ ಗೌರವಾಧ್ಯಕ್ಷ ನಡ ಗುತ್ತು ಧನಂಜಯ ಅಜ್ರಿಯರವರು ಹಾಗೂ ವಸಂತ ಶೆಟ್ಟಿ ಶ್ರದ್ಧಾ ಬೆಳ್ತಂಗಡಿ ಬಿಡುಗಡೆಗೊಳಿಸಿದರು.,
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಪ್ರವೀಣ್ ವಿ.ಜಿ., ಕಾರ್ಯದರ್ಶಿ ಜನಾರ್ಧನ ಗೌಡ, ಲಾಯಿಲ ವಲಯದ ಯೋಜನಾಧಿಕಾರಿ ಮಲ್ಲಿಕಾ, ಮುನಿರಾಜ ಅಜ್ರಿ, ಅಜಿತ್ ಆರಿಗ, ಸುಭಾಸ್ ನಡ, ತನಿಯಪ್ಪ ಗೌಡ, ಉಮೇಶ್ ನಡ, ವಸಂತಿ ನಡ, ಸಮಿತಿಯ ಎಲ್ಲಾ ಪದಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.











