ಮಿತ್ತಬಾಗಿಲು: ಸಾವ೯ಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಿತ್ತಬಾಗಿಲು, ಮಹಿಳಾ ವಿಭಾಗದ ವತಿಯಿಂದ ಬೆಳ್ಳಿ ಹಬ್ಬದ ಪ್ರಯುಕ್ತ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಶ್ರೀ ಸೂಕ್ತ ಹವನ ಕಾರ್ಯಕ್ರಮ ಆ.28ರಂದು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಜರುಗಿತು.
ಬೆಂಗಳೂರು ಕ್ಷೇಮವನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಶ್ರದ್ಧಾ ಅಮಿತ್ ಸಭಾಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷೀತ್ ಶಿವರಾಂ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಾಹಕ ಅನಿಲ್ ಕುಮಾರ್ ಎಸ್.ಎಸ್, ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಪುಷ್ಷಗಿರಿ, ಬಂಗಾಡಿ ಅರಮನೆಯ ಯಶೋಧರ ಬಲ್ಲಾಳ್ ಭಾಗವಹಿಸಿದ್ದರು.

ಧಾರ್ಮಿಕ ಪ್ರವಚನ ಅಶ್ವಿನಿ ಅರವಿಂದ್ ಹೆಬ್ಬಾರ್ ಮುಂಡಾಜೆ ನೀಡಿದರು. ಕೊಲ್ಲಿ ದೇವಸ್ಥಾನ ಆಡಳಿತ ಮೊಕ್ತಸರ ದಾಸಪ್ಪ ಗೌಡ ಕಾಂಜಾನು, ಕೊಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಸತೀಶ್ ಕಾಮತ್, ಮಿತ್ತಬಾಗಿಲು ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ. ಮೋಹನ್ ಬಂಗೇರ ಕಾರಿಂಜ, ಕೊಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೇಶವ ಪಡಕೆ, ಕೊಲ್ಲಿ ಮಹಿಳಾ ವಿಭಾಗ ಸಮಿತಿ ಅಧ್ಯಕ್ಷೆ ವನಿತಾ ಉಮೇಶ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೊಲ್ಲಿಯಲ್ಲಿ ಸಾವ೯ಜನಿಕ ಗಣೆಶೋತ್ಸವ ಆರಂಭಿಸಿದ ಸ್ಥಾಪಕ ಅಧ್ಯಕ್ಷ
ಕೇಶವ ವೀ.ಫಡಕೆ ಹಾಗೂ ಶ್ರೀಮತಿ ಉಷಾ ಕೆ.ಫಡಕೆಯವರನ್ನು ಸಮಿತಿ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಚ೯ಕರಾದ ಶಂಕರ ನಾರಾಯಣ ತೋಡ್ತಿಲ್ಲಾಯ ಪರವಾಗಿ ಅವರ ಪುತ್ರ ಹರಿ ತೋಡ್ತಿಲ್ಲಾಯ ಇವರನ್ನು ಗೌರವಿಸಲಾಯಿತು.ವಿಜಯಲಕ್ಷ್ಮಿ ಶೆಟ್ಟಿ ಇವರ ಪ್ರಾಥ೯ನೆ ಬಳಿಕ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಜ್ಯೋತಿಲಕ್ಷ್ಮಿ ಸ್ವಾಗತಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಮೀನಾಕ್ಷಿ ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆ ವನಿತಾ ಉಮೇಶ್ ವಂದಿಸಿದರು.











