ಬೆಳ್ತಂಗಡಿ: ಇಲ್ಲಿಯ ಮಾರಿಗುಡಿ ಸಮೀಪ ಹವಿಷ್ಕಾ ಕಾಂಪ್ಲೆಕ್ಸ್ನಲ್ಲಿ ಪುಷ್ಪರಾಜ್ ಸವಣಾಲು ಇವರ ಶ್ರೀ ಸಾಯಿ ರೇಕಿ ತರಬೇತಿ ಕೇಂದ್ರವು ಶುಭಾರಂಭಗೊಂಡಿತು.

ಉದ್ಘಾಟನೆಯನ್ನು ವಿಜಯ ಗುರೂಜಿ ಮಾದುಕೋಡಿ, ಹರೀಶ್ ಗುರೂಜಿ ಮಾದುಕೋಡಿ ನೆರವೇರಿಸಿದರು. ಈ ಸಂದರ್ಭ ಕಟ್ಟಡದ ಮಾಲಕರಾದ ತುಕರಾಮ ಬಂಗೇರ ಹಾಗೂ ಗಣ್ಯರು, ಅತಿಥಿಗಳು ಮತ್ತು ಸಂಸ್ಥೆಯ ಮಾಲಕರ ಕುಟುಂಬಸ್ಥರು ಉಪಸ್ಥಿತರಿದ್ದರು.
ಸಂಸ್ಥೆಯಲ್ಲಿ ರೇಕಿ, ರಾಜಕ್ರಿಯ ರೇಕಿ, ಏಂಜಲ್ಸ್ ಮತ್ತು ದೇವಸ್ ಥೆರಪಿ ತರಗತಿಗಳು ಮತ್ತು ವಿವಿಧ ಬಗೆಯ ಕ್ರಿಸ್ಟಾಲ್, ಜೆಮ್ಸ್ಟೋನ್ ಲಭ್ಯ.











