ಉಜಿರೆ: ಶ್ರೀ ನಾರಾಯಣ ಗುರು ಮಂದಿರ ಸೇವಾ ಸಮಿತಿ ಶಿವಗಿರಿ ಇಚ್ಚಿಲ ಉಜಿರೆ ಹಾಗೂ ಶ್ರೀ ಗುರುನಾರಾಯ್ ಸೇವಾ ಸಂಘ ಉಜಿರೆ ಇದರ ವತಿಯಿಂದ ಉಜಿರೆಯ ಬ್ರಹ್ಮಶ್ರೀ ಗುರುನಾರಾಯಣ ಮಂದಿರದಲ್ಲಿ ನಾರಾಯಣ ಗುರುಗಳ 172ನೇ ಜಯಂತೋತ್ಸವದ ಅಂಗವಾಗಿ ಗುರುಗಳಿಗೆ ಗೆ 172 ಹಣತೆಗಳನ್ನು ಬೆಳಗಿಸಿ ವಿಶೇಷ ಪೂಜೆ ಹಾಗೂ ಗುರುನಮನ ಮತ್ತು ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಲಾಯಿತು.

ಗುರು ಮಂದಿರಕ್ಕೆ ಉಜಿರೆಯ ಸಮಾಜಬಾಂಧವರು ಆಸನ ದ ವ್ಯವಸ್ಥೆಗೆಬೇಕಾಗಿ ಕೊಡುಗೆಯಾಗಿ ನೀಡಿದ ಕುರ್ಚಿಗಳನ್ನು ಸ್ವೀಕರಿಸಲಾಯಿತು. ಮುಂದಿನ ದಿನದಲ್ಲಿ ಒಂದೇ ದಿನದಲ್ಲಿ ಗುರು ಪೂಜೆ ಹಾಗೂ ಗೆಜ್ಜೆ ಗಿರಿ ಮೇಳದ ಯಕ್ಷಗಾನ ನಡೆಸುವ ಬಗ್ಗೆ ಚರ್ಚಿಸಲಾಯಿತು.
ಕಾರ್ಯ ಕ್ರಮದಲ್ಲಿ ನಾರಾಯಣ ಗುರು ಮಂದಿರ ಸೇವಾ ಸಮಿತಿ ಯ ಅಧ್ಯಕ್ಷ ರವಿಕುಮಾರ್ ಬರಮೇಲು, ಉಪಾಧ್ಯಕ್ಷ ದಿನೇಶ್ ಪೂಜಾರಿ ಮನಿಕ್ಕೆ, ತಾರಾನಾಥ್ ಪೂಜಾರಿ ಬ್ರಹ್ಮಶ, ಸಚ್ಚಿದಾನಂದ ಇಚ್ಚಿಲ, ಉಮೇಶ್ ಪೂಜಾರಿ ಅತ್ತಾಜೆ, ಹರೀಶ್ ಬರಮೇಲು, ಸುರೇಶ್ ಪೂಜಾರಿ ಮಾಚಾರು ಹಾಗೂ ಸಂಘದ ಪದಾಧಿಕಾರಿಗಳು, ಸಮಾಜ ಭಾಂದವರು ಉಪಸ್ಥಿತರಿದ್ದರು.











