28.6 C
ಪುತ್ತೂರು, ಬೆಳ್ತಂಗಡಿ
August 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ದೇವಾಂಗ ಸಮಾಜ ಮುಂಡಾಜೆ ಘಟಕದ ಸಭೆ

ಮುಂಡಾಜೆ : ದೇವಾಂಗ ಸಮಾಜ ಮುಂಡಾಜೆ ಘಟಕ ಇದರ 34ನೇ ಘಟಕ ಸಭೆಯು ಶಶಿಧರ ನೇಕಾರ ಬನಶಂಕರಿ ಇವರ ಮನೆಯಲ್ಲಿ ನಡೆಯಿತು.


ಸಭೆಯನ್ನು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಶಿಧರ ನೇಕಾರ ವಹಿಸಿದ್ದು, ವೇದಿಕೆಯಲ್ಲಿ ಮಾಜಿ ಅಧ್ಯಕ್ಷರು, ಮಾಜಿ ವಲಯ ಸ್ಥಾಪಕಧ್ಯಕ್ಷರು, ವಲಯಾಧ್ಯಕ್ಷರು ಹಾಗೂ ಘಟಕದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೇಶವ ದೇವಾಂಗರವರು ರಕ್ಷಾಬಂಧನದ ಮಹತ್ವವನ್ನು ಪೌರಾಣಿಕ ಕಥೆಯ ಮೂಲಕ ವಿವರಿಸಿ ತ್ಯಾಗ, ಪ್ರೀತಿ, ರಕ್ಷಣೆಯ ಸಹೋದರತ್ವದ ಅಭಯವನ್ನು ತಿಳಿಸಿದರು. ಮತ್ತು ಸಾಂಕೇತಿಕವಾಗಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಿ ಸಹೋದರತ್ವವನ್ನು ಸಾರಲಾಯಿತು.


ಶ್ರೀಮತಿ ಸವಿತಾ ಕೇಶವ ದೇವಾಂಗರವರು ಹಿಂದಿನ ಸಭೆಯ ವರದಿ ವಾಚಿಸಿ ಅನುಮೋದಿಸಲಾಯಿತು.
ಕಾರ್ಯದರ್ಶಿ ಸಚಿನ್ ಎಂ ಎಸ್ ಬೆಳ್ತಂಗಡಿ ರವರು ಕಾರ್ಯಕ್ರಮದ ವರದಿ ವಾಚಿಸಿ, ಖರ್ಚು ವೆಚ್ಚಗಳ ವಿವರವನ್ನು ಸಭೆಯಲ್ಲಿ ತಿಳಿಸಿ, ಮಿಗತೆಯ ಬಜೆಟ್ ಘೋಷಿಸಿ, ಸಹಕರಿಸಿದ ಘಟಕದ ಎಲ್ಲಾ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.


ಭಾಸ್ಕರ ಎಂ ಡಿ , ರವಿಚಂದ್ರ ನೆಯ್ಯಾಲು,ಕೇಶವ ದೇವಾಂಗ , ಸಂಜೀವ ಎಂ ಡಿ , ಸವಿತಾ ಕೆ ದೇವಾಂಗ, ರೋಹಿತ್ ಕಾಶಿಬೆಟ್ಟು ರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ, ಕಾರ್ಯಕ್ರಮದ ಯಶಸ್ಸನ್ನು ಹಂಚಿಕೊಂಡು ಮುಂದೆಯೂ ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಮಾಡಬೇಕೆಂದು ಎಲ್ಲರ ಸಹಕಾರ ಮತ್ತು ಮಾರ್ಗದರ್ಶನಕ್ಕೆ ಅಭಿನಂದನೆ ಸಲ್ಲಿಸಿದರು.


ಮುಂಗಡ ಪಾವತಿಗೆ ಇನ್ನು ಮುಂದೆ ಹೊಸ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಯಿತು. ಘಟಕಾಧ್ಯಕ್ಷರು ಮಾತನಾಡಿ ಕಾರ್ಯಕ್ರಮವು ಯಶಸ್ವಿಯಾಗಲು ಎಲ್ಲರೂ ಜವಾಬ್ದಾರಿಯಿಂದ ನಡೆಯಬೇಕು, ಇಂತಹ ಮಾದರಿ ಕಾರ್ಯಕ್ರಮವನ್ನು ಇನ್ನು ಮುಂದೆಯೂ ನಾವೆಲ್ಲ ಸೇರಿ ಯಶಸ್ವಿಯಾಗಿ ಮಾಡೋಣವೆಂದು ಹಾರೈಸಿ, ಘಟಕದ ಸದಸ್ಯರಿಗೆ ಅಭಿನಂದಿಸಿ, ತಮ್ಮ ಕೊಡುಗೆಯಾಗಿ ಸದಸ್ಯರ ಮನೆಯ ಕಾರ್ಯಕ್ರಮದ ಉಪಯೋಗಕ್ಕೆಂದು 50 ಊಟದ ಸ್ಟೀಲ್ ತಟ್ಟೆಯನ್ನು ಉಚಿತವಾಗಿ ನೀಡಿದರು.


ಘಟಕದ ನಿಧಿ ಸಮರ್ಪಣಾ ಕಾರ್ಯಕ್ಕೆ ನಿಧಿ ಸಮರ್ಪಿಸಿದ ರಾಜು ತಮಿಳುನಾಡು ರವರನ್ನು ಸನ್ಮಾನಿಸಿ ಫಲಕವಿತ್ತು ಅಭಿನಂದಿಸಲಾಯಿತು. ಇಂದಿನ ಸಭೆಯಲ್ಲಿ 3 ಸದಸ್ಯರಿಗೆ ಮುಂಗಡ ಪಾವತಿಯನ್ನು ವಿತರಿಸಲಾಯಿತು.
ಮುಂದಿನ ಸಭೆಯನ್ನು ಶ್ರೀಮತಿ ವಸಂತಿ ರಾಜಗೋಪಾಲ್ ರವರ ಮನೆಯಲ್ಲಿ ನಡೆಸುವುದೆಂದು ನಿರ್ಧರಿಸಿ ಸಭಾ ವೀಳ್ಯ ನೀಡಲಾಯಿತು. ಶ್ರಾವ್ಯ ಮತ್ತು ಶ್ರವಣ್ ಪ್ರಾರ್ಥಿಸಿದರು, ಶ್ರೀಮತಿ ರಕ್ಷಿತಾ ಶಶಿಧರ್ ಸ್ವಾಗತಿಸಿ, ಸಚಿನ್ ಎಂ ಎಸ್ ನಿರೂಪಿಸಿ, ರೋಹಿತ್ ಕಾಶಿಬೆಟ್ಟು ಧನ್ಯವಾದವಿತ್ತರು.

Related posts

ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ವತಿಯಿಂದ ಹಿರಿಯ ಪತ್ರಕರ್ತ ವಿನಯ್ ಕುಮಾರ್ ಸೇಮಿತರಿಗೆ ನುಡಿ ನಮನ

Suddi Udaya

ಜೆಸಿಐ ಮಡಂತ್ಯಾರಿನಿಂದ “ಪ್ರಯಾಸ್ ಡೇ” ಮತ್ತು “ವಿಶ್ವ ಪರಿಸರ ದಿನ ಆಚರಣೆ”

Suddi Udaya

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ಮನಶ್ರೀ ರವರಿಗೆ ಬಿಜೆಪಿ ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಅಭಿನಂದನೆ

Suddi Udaya

ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಞವಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ ಉದ್ಘಾಟನೆ

Suddi Udaya

ಮಡಂತ್ಯಾರು- ಪುಂಜಾಲಕಟ್ಟೆ ವರ್ತಕರ ಸಂಘದಿಂದ ಆರ್ಥಿಕ ನೆರವು

Suddi Udaya
error: Content is protected !!