ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 55ನೇ ವರ್ಷದ, ಆಷಾಡ ಶ್ರಾವಣ ಮಾಸದ ವಿಶೇಷ ಪುರಾಣ ಪ್ರವಚನದಲ್ಲಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ ಮತ್ತು ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ ಅವರಿಂದ ಆ.29ರಂದು ಕುಮಾರವ್ಯಾಸ ಭಾರತದ ನಹುಷ ಪ್ರಶ್ನೆಯ ಭಾಗದ ವಾಚನ ವ್ಯಾಖ್ಯಾನವು, ಶ್ರೀ ಮಂಜುನಾಥನ ಸನ್ನಿಧಿಯ ಎದುರಿನ ಪ್ರವಚನ ಮಂಟಪದಲ್ಲಿ ನಡೆಯಿತು. ಸಹಸ್ರಾರು ಭಕ್ತರಿಗೆ ಗಮಕದ ರಸದೌತಣ ನಡೆಯಿತು.







