ಬೆಳ್ತಂಗಡಿ: ದೈವ ಕ್ಷೇತ್ರ ಬಡೆಕ್ಕಾವಿನಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ನಡೆಯುತ್ತಿದ್ದು ಪ್ರತಿ ತಿಂಗಳು ಸಂಕ್ರಮಣದಂದು ಅಪ್ಪೆ ಕಲ್ಲುರ್ಟಿಗೆ ದೊಂದಿ ಕೋಲ ಕೊರಗಜ್ಜನಿಗೆ ಅಗೇಲು ಸೇವೆ ನಡೆಯುತ್ತಿದೆ.
ಈಗಾಗಲೇ ಒಂದನೇ ತರಗತಿಯಿಂದ ಪದವಿ ಪೂರ್ವ ಕಾಲೇಜಿನವರೆಗೆ ನೋಟ್ ಬುಕ್ ವಿತರಣೆ, ವಿದ್ಯಾರ್ಥಿವೇತನ ಕಾರ್ಯಕ್ರಮಗಳು ಹಲವು ಬಾರಿ ನಡೆದಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು ದೈವಕ್ಕೆ ಸಂಬಂಧಪಟ್ಟ ನಾಟಕ ಸಕ್ರಿಯವಾಗಿ ನಡೆಯುತ್ತಿದ್ದು ಇದೀಗ ನಾವೂರು, ಇಂದಬೆಟ್ಟು, ನಡ, ಕನ್ಯಾಡಿಯ 40 ವರ್ಷಕ್ಕಿಂತ ಮೇಲ್ಪಟ್ಟ ಗ್ರಾಮಸ್ಥರಿಗೆ ತಜ್ಞ ವೈದ್ಯರುಗಳಿಂದ ಸೆ.17ರಂದು ಕಣ್ಣಿನ ಪರೀಕ್ಷೆ ಹಾಗೂ ಉಚಿತ ಕನ್ನಡಕ ವಿತರಣೆಯು ಸಂಜೆ 5 ಗಂಟೆಗೆ ದೈವ ಕ್ಷೇತ್ರ ಬಡೆಕ್ಕಾವುಗುತ್ತುವಿನಲ್ಲಿ ನಡೆಯಲಿದೆ.
ಇದರ ಸದುಪಯೋಗವನ್ನು ನಾಲ್ಕು ಗ್ರಾಮಗಳ ಗ್ರಾಮಸ್ಥರು ಪಡೆದುಕೊಳ್ಳಬಹುದು. ಆಸಕ್ತರು ಸೆ.05 ರ ಒಳಗೆ 9845590323 ಫೋನ್ ಮಾಡಿ ತಿಳಿಸಬಹುದು











