ಗುರುವಾಯನಕೆರೆ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಎಕ್ಸೆಲ್ ಟೆಕ್ನೋ ಸ್ಕೂಲ್, ಗುರುವಾಯನಕೆರೆ ವತಿಯಿಂದ ಮಕ್ಕಳಿಗಾಗಿ ‘ಗೋಕುಲದ ಗೋಪಾಲ–ಬೃಂದಾವನದ ರಾಧೆ’ ವೇಷಭೂಷಣ ಸ್ಪರ್ಧೆಯನ್ನು ಸೆ.6ರಂದು ಬೆಳಗ್ಗೆ 9.30ಕ್ಕೆ ಭಾನುವಾರ ಆಯೋಜಿಸಲಾಗಿದೆ.

ಸ್ಪರ್ಧೆಯಲ್ಲಿ ಎಲ್ಲ ಮಕ್ಕಳಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಜೂನಿಯರ್ ವಿಭಾಗದಲ್ಲಿ 1ರಿಂದ 3 ವರ್ಷದೊಳಗಿನ ಮಕ್ಕಳಿಗೆ ಹಾಗೂ ಸೀನಿಯರ್ ವಿಭಾಗದಲ್ಲಿ 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಸ್ಪರ್ಧೆ ನಡೆಯಲಿದೆ. ಎರಡೂ ವಿಭಾಗಗಳಲ್ಲಿಯೂ ಪ್ರಥಮ ಬಹುಮಾನ ರೂ.3,999 ಹಾಗೂ ಟ್ರೋಫಿ, ದ್ವಿತೀಯ ರೂ.2,999 ಹಾಗೂ ಟ್ರೋಫಿ, ತೃತೀಯ ರೂ.1,599 ಹಾಗೂ ಟ್ರೋಫಿ ನೀಡಲಾಗುತ್ತದೆ. 4ರಿಂದ 7ನೇ ಸ್ಥಾನದವರೆಗೆ ತಲಾ ರೂ.500 ಹಾಗೂ ಟ್ರೋಫಿ ಬಹುಮಾನವಿದೆ.
ಪ್ರತಿ ವಿಭಾಗದಲ್ಲೂ ಗೋಪಾಲ ಮತ್ತು ರಾಧೆ ಪಾತ್ರಗಳಿಗೆ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ. ಜೂನಿಯರ್ ವಿಭಾಗದಲ್ಲಿ ಅಮ್ಮನಿಗೆ ಕೃಷ್ಣ/ರಾಧೆಯಾಗಿ ಭಾಗವಹಿಸಲು ಅವಕಾಶವಿದೆ.
ಮಗುವಿನ ಜನನ ಪ್ರಮಾಣಪತ್ರದ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ನೋಂದಣಿಯನ್ನು ಸೆ.5ರಂದು ಸಂಜೆ 5 ಗಂಟೆಯೊಳಗೆ ಮಾಡಿಕೊಳ್ಳಬೇಕು. ಸ್ಪರ್ಧೆಯ ದಿನ ನೋಂದಣಿಗೆ ಅವಕಾಶವಿರುವುದಿಲ್ಲ. ಹಿನ್ನೆಲೆ ಸಂಗೀತಕ್ಕೆ ಅವಕಾಶವಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ಹೆಚ್ಚಿನ ಮಾಹಿತಿಗಾಗಿ 6364156449, 9606455769 ಸಂಖ್ಯೆಯನ್ನು ಸಂಪರ್ಕಿಸಬಹುದು.











