September 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಆಶಾಲತಾ ಪ್ರಶಾಂತ ರವರಿಗೆ ಜೇಸಿ ವಲಯ ಮಟ್ಟದ “ಸಾಧನಾ ಶ್ರೀ” ಪ್ರಶಸ್ತಿ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ನಿಕಟ ಪೂರ್ವಾಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ ಇವರಿಗೆ ಜೆಸಿಐ ಭಾರತದ ವಲಯ 15 ರ 2026 ನೇ ಸಾಲಿನ ಪ್ರತಿಷ್ಠಿತ “ಸಾಧನಾ ಶ್ರೀ” ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಮಡಂತ್ಯಾರಿನಲ್ಲಿ ನಡೆದ ವಲಯದ “ವ್ಯವಹಾರ ಹಾಗೂ ಅಭಿವೃದ್ಧಿ ಮತ್ತು ಬೆಳವಣಿಗೆ” ಸಮ್ಮೇಳನದಲ್ಲಿ ವಲಯಾಧ್ಯಕ್ಷರಾದ ಸಂತೋಷ್ ಶೆಟ್ಟಿ ವ್ಯವಹಾರ ವಿಭಾಗ ನಿರ್ದೇಶಕ ವಿಕೇಶ್ ಮಾನ್ಯ, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕ ರಂಜಿತ್ ಎಚ್‌ಡಿ ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಅಧ್ಯಕ್ಷ ಜಿತೇಶ್ ಕುಮಾರ್, ಕಾರ್ಯದರ್ಶಿ ರಕ್ಷೀತ್ ಅಂಡಿಂಜೆ, ಪೂರ್ವಾಧ್ಯಕ್ಷರಾದ ನಾರಾಯಣ ಶೆಟ್ಟಿ, ಸಂತೋಷ್ ಪಿ ಕೊಟ್ಯಾನ್, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ ಲಾೖಲ, ಅಭಿನಂದನ್ ಹರೀಶ್, ಸ್ವರೂಪ್ ಶೇಖರ್ ಹಾಗೂ ಘಟಕದ ಪದಾಧಿಕಾರಿಗಳು ಸದಸ್ಯರು,ಉಜಿರೆ ಘಟಕದ ಸದಸ್ಯರು ಉಪಸ್ಥಿತರಿದ್ದರು.

ಶ್ರೀಮತಿ ಆಶಾಲತಾ ಪ್ರಶಾಂತ ಇವರು 2017 ರಲ್ಲಿ ಜೆಸಿಐ ಬೆಳ್ತಂಗಡಿ ಮೂಲಕ ಜೇಸಿ ಆಂದೋಲನದಲ್ಲಿ ತೊಡಗಿಸಿಕೊಂಡು ಘಟಕದ ವಿವಿಧ ಜವಬ್ದಾರಿ ನಿರ್ವಹಿಸಿ 2025 ನೇ ಸಾಲಿನ ಘಟಕದ ಅಧ್ಯಕ್ಷೆಯಾಗಿ ತರಬೇತಿ, ಸಾಮಾಜಿಕ ಬದ್ಧತೆ, ವ್ಯವಹಾರ, ಆರೋಗ್ಯ, ಯುವ ಹಾಗೂ ಮಹೀಳಾ ಸಬಲೀಕರಣ ಮುಂತಾದ ಸ್ತರಗಳಲ್ಲಿ ಕಾರ್ಯಕ್ರಮ ಮಾಡುವುದರೊಂದಿಗೆ ಅತ್ಯುತ್ತಮ ಅಧ್ಯಕ್ಷರಾಗಿ, ಅದಲ್ಲದೇ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಸುಧೀರ್ಘ ಇತಿಹಾಸದಲ್ಲಿ ಒಬ್ಬ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಮೂಡಿಬಂದವರು.


ಲಾೖಲ ಗ್ರಾಮ ಪಂಚಾಯತ್ ಇದರ ಮಾಜಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ ಇವರು ರಾಷ್ಟ್ರೀಯ ಪಕ್ಷದ ತಾಲೂಕು ಮಟ್ಟದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಂಗೋಲಿ ಹಾಗೂ ಚಿತ್ರಕಲಾವಿದೆಯಾದ ಇವರು ಒಬ್ಬ ವಸ್ತ್ರ ವಿನ್ಯಾಸಕಿಯಾಗಿ “ಆಶಾ’ಸ್ ದ ಬ್ರಾಂಡ್ ಬೂಟಿಕ್” ಸಂಸ್ಥೆಯನ್ನು ಸ್ಥಾಪಿಸಿ ಉದ್ಯಮ ನಡೆಸುತ್ತಿದ್ದು ತಮ್ಮ ಸಾಮರ್ಥ್ಯ, ನಾಯಕತ್ವ ಹಾಗೂ ಸಂಘಟನಾ ಕೌಶಲ್ಯ ವಿವಿಧ ಸಾಧನೆಗಳನ್ನು ಪರಿಗಣಿಸಿ ಈ “ಸಾಧನಾ ಶ್ರೀ” ಪ್ರಶಸ್ತಿಗೆ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದಿಂದ ಶಿಫಾರಸು ಮಾಡಲಾಯಿತು.

Related posts

ಉಪ್ಪಿನಂಗಡಿ-ಕುಪ್ಪೆಟ್ಟಿ ಹೆದ್ದಾರಿಯಲ್ಲಿ ಮರಣ ಗುಂಡಿಗಳ ತಾಂಡವ: ದುಸ್ತರಗೊಂಡ ಸಂಚಾರ | ವಾಹನ ಸವಾರರಿಗೆ ತೀವ್ರ ಸಂಕಷ್ಟ: ಸುದ್ದಿ ಉದಯ ಜನಧ್ವನಿ

Suddi Udaya

ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ 2025: ಸಾನ್ವಿ ಎಸ್ ಕೋಟ್ಯಾನ್ ಬಳಂಜರವರಿಗೆ ಪ್ರಶಸ್ತಿ

Suddi Udaya

ತೆಂಕಕಾರಂದೂರು: ಆಟೋ ರಿಕ್ಷಾ ಹಾಗೂ ಬೈಕ್ ಅಪಘಾತ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಸುರೇಶ್ ವಿ ಅವರಿಗೆ ಸೇವಾ ನಿವೃತ್ತಿ, ಕಾಲೇಜಿನಲ್ಲಿ ಬಿಳ್ಕೋಡುಗೆ ಸಮಾರಂಭ, ಕಾಲೇಜು ಹಾಗೂ ಹಳೆ ವಿದ್ಯಾರ್ಥಿಗಳಿಂದ ಸನ್ಮಾನ

Suddi Udaya

ಆ.21-22: ರೈತರಿಗೆ ಜೇನು ಕೃಷಿ ಹಾಗೂ ಜೇನಿನ ಮೌಲ್ಯವರ್ಧನೆ ಕುರಿತು ಸಾಂಸ್ಥಿಕ ತರಬೇತಿ

Suddi Udaya

ಎ.12: ಕೊಕ್ಕಡ ಮಾಸ್ತಿಕಲ್ಲುಮಜಲುನಲ್ಲಿ ಶ್ರೀ ಪಿಲಿಚಾಮುಂಡಿ ಮತ್ತು ಸಹ ಪರಿವಾರ ದೈವಗಳ ನೇಮೋತ್ಸವ

Suddi Udaya
error: Content is protected !!