ಕೊಯ್ಯೂರು: ಕೊಯ್ಯೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಕೊಯ್ಯೂರು ಶ್ರೀ ಕೃಷ್ಣ ಭಜನಾ ಮಂಡಳಿ (ರಿ.) ಆದೂರು ಪೇರಾಲ್, ಕೊಯ್ಯೂರ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ 39 ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿಯು ಆಟೋಟ ಸ್ಪರ್ಧೆ ಕಾರ್ಯಕ್ರಮ ಅಟದ ಮೈದಾನದಲ್ಲಿ ಸೆ.4. ನಡೆಯಿತು.
ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರವೀಂದ್ರನಾಥ್ ಪಿ.ಕಾರ್ಯಕ್ರಮಕ್ಕೆ ಚಾಲನೆ ನೀಡಿ ,ಶುಭ ಹಾರೈಸಿದರು.
ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿವಿಧ ಬಗೆಯ ಆಟೋಟ ಸ್ಪರ್ಧೆಗಳು ಜರಗಿತು.
ಸ್ಥಳೀಯ ಅಂಗನವಾಡಿ ಮಕ್ಕಳಿಗೆ ಕಪ್ಪೆ ಜಿಗಿತ, ಮುದ್ದುಕೃಷ್ಣ ವೇಷ ಸ್ಪರ್ಧೆಗಳ ಸಾರ್ವಜನಿಕರು ನೋಡಿ ಆನಂದಿಸಿದರು.
ಪ್ರಾಥಮಿಕ ಶಾಲಾ ಮಕ್ಕಳಿಗೆ 1ಹಾಗೂ 2 ತರಗತಿ ಮಕ್ಕಳಿಗೆ ಲಕ್ಕಿಗೇಮ್ ಮತ್ತು ಲಿಂಬೆ ಚಮಚ, 3 ಮತ್ತು 4 ಮಕ್ಕಳಿಗೆ ಸಂಗೀತ ಕುರ್ಚಿ ಮತ್ತು ಬಾಟಲಿಗೆ ನೀರು ತುಂಬಿಸುವುದು.
5 ಮತ್ತು 7ನೇ ತರಗತಿ ಮಕ 100ಮೀ ಓಟ ಮತ್ತು ಹಗ್ಗಜಗ್ಗಾಟ ,ಪ್ರೌಢ ಶಾಲಾ ಮಕ್ಕಳಿಗೆ ಹುಡುಗರಿಗೆ ತೆಂಗಿನಕಾಯಿ ಎಸೆತ ಮತ್ತು 100ಮೀ ಓಟ ಹುಡುಗಿಯರಿಗೆ 100 ಮೀ ಓಟ, ಪುರುಷರಿಗೆ ಜಾರು ಕಂಬ, ಮೊಸರು ಕುಡಿಕೆ, ಹಗ್ಗಜಗ್ಗಾಟ, ವಾಲಿಬಾಲ್ ಪಂದ್ಯಾಟ, ಮಹಿಳೆಯರಿಗೆ ಮೊಸರು ಕುಡಿಕೆ, ತ್ರೋಬಾಲ್, ಹಗ್ಗಜಗ್ಗಾಟ, ಲಕ್ಕಿಗೇಮ್ ಮತ್ತು ರಾತ್ರಿ 7ರಿಂದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ವಿಶೇಷ ಭಜನಾ ಕಾರ್ಯಕ್ರಮಗಳ ನಡೆಯಿತು.












