28.2 C
ಪುತ್ತೂರು, ಬೆಳ್ತಂಗಡಿ
September 9, 2026
Uncategorized

ದುರ್ನಾತ ಬೀರುತ್ತಿರುವ ಬೆಳ್ತಂಗಡಿ ಮಾರಿಗುಡಿ ಪರಿಸರ : ಭಕ್ತರು ಮೂಗುಮುಚ್ಚಿಕೊಂಡು ಬರಬೇಕಾದ ಪರಿಸ್ಥಿತಿ

ಬೆಳ್ತಂಗಡಿ: ಬೆಳ್ತಂಗಡಿ ನಗರದ ಮಾರಿಗುಡಿ ಪರಿಸರವು ದುರ್ನಾತ ಬೀರುತ್ತಿದ್ದು, ಮಾರಿಗುಡಿಗೆ ಭಕ್ತರು ಮೂಗುಮುಚ್ಚಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾರಿಗುಡಿ ಪರಿಸರದಲ್ಲಿ ಹಾದು ಹೋಗುವ ಚರಂಡಿಯಲ್ಲಿ ಪೂರ್ತಿ ಕಸಕಡ್ಡಿ ತುಂಬಿದ್ದು, ಚರಂಡಿಯಲ್ಲಿ ಮಲೀನ ನೀರು ಸಂಗ್ರಹವಾಗಿದೆ. ಚರಂಡಿಯಲ್ಲಿ ಗಿಡಕಟ್ಟಿಗಳು ಬೆಳೆದು ಚರಂಡಿಯ ಸ್ವಚ್ಚತಾ ಕಾರ್ಯವನ್ನು ನಡೆಸದಿರುವುದರಿಂದ ಮಲೀನ ನೀರು ಸರಿಯಾಗಿ ಹರಿದು ಹೋಗದೆ ಅಲಲ್ಲಿ ಶೇಖರಣೆಗೊಂಡು ಈಗ ದುರ್ನಾತ ಬೀರುತ್ತಿದೆ. ಮಾರಿಗುಡಿ ಕಂಪೌಂಡನ ಸುತ್ತಾ ಗಿಡ, ಕಳೆಗಿಡಗಳು ಬೆಳೆದು ನಿಂತಿದೆ.

ಈ ಪರಿಸರ ಈಗ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದ್ದು, ಅಸಹ್ಯಕರ ಸ್ಥಿತಿಯಾಗಿದೆ. ಮಾರಿಗುಡಿಗೆ ಬರುವ ಭಕ್ತರು ಮೂಗಿಗೆ ಕೈ ಹಿಡಿದುಕೊಂಡೇ ಬರಬೇಕಾಗಿದೆ. ಆದ್ದರಿಂದ ನಗರ ಪಂಚಾಯತದ ಅಧಿಕಾರಿಗಳು ಮಾರಿಗುಡಿ ಪರಿಸರಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಮಾರಿಗುಡಿ ಪರಿಸರದ ಸ್ವಚ್ಚತೆಯನ್ನು ಆದ್ಯಷ್ಟು ಶೀಘ್ರ ಮಾಡುವಂತೆ ಭಕ್ತರು ಒತ್ತಾಯಿಸಿದ್ದಾರೆ.

Related posts

ಕುಪ್ಪೆಟ್ಟಿಯಲ್ಲಿ ರಿಕ್ಷಾ ಮತ್ತು ನಂದಿನಿ ಟೆಂಪೋ ಡಿಕ್ಕಿ: ರಿಕ್ಷಾ ಚಾಲಕ ಗಂಭೀರ ಗಾಯ

Suddi Udaya

ದಸ್ಕತ್ ತುಳು ಚಲನಚಿತ್ರದ ಪೋಸ್ಟರ್ ಬಿಡುಗಡೆ

Suddi Udaya

ಮಡಂತ್ಯಾರು ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದಿಂದ ಬಿಎಂಎಸ್ ಸ್ಥಾಪನೆ ದಿನಾಚರಣೆ

Suddi Udaya

ಅರಸಿನಮಕ್ಕಿ ಸ.ಪ್ರೌ. ಶಾಲೆ ಹಾಗೂ ಗ್ರಾಮ ಪಂಚಾಯತ್ ನ ಅರಿವು ಕೇಂದ್ರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ

Suddi Udaya

ಸಾರ್ವಜನಿಕ ಪ್ರದೇಶದಲ್ಲಿ ಬೇಕಾಬಿಟ್ಟಿ ಕಸ ಎಸೆದವರಿಂದಲೇ ವಿಲೇವಾರಿ ಮಾಡಿ, ದಂಡ ವಿಧಿಸಿದ: ಲಾಯಿಲ ಗ್ರಾ‌ಪಂ ಪಿಡಿಓ ಶ್ರೀನಿವಾಸ್ ಡಿ ಪಿ ಹಾಗೂ ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿಯವರಿಗೆ ಸಾರ್ವಜನಿಕರಿಂದ ಪ್ರಶಂಸೆ

Suddi Udaya

ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷರಾಗಿ ಹೇಮಾವತಿ, ಉಪಾಧ್ಯಕ್ಷರಾಗಿ ಪ್ರಿಯಾ ಆಯ್ಕೆ

Suddi Udaya
error: Content is protected !!