
ಬೆಳ್ತಂಗಡಿ: ಬೆಳ್ತಂಗಡಿ ನಗರದ ಮಾರಿಗುಡಿ ಪರಿಸರವು ದುರ್ನಾತ ಬೀರುತ್ತಿದ್ದು, ಮಾರಿಗುಡಿಗೆ ಭಕ್ತರು ಮೂಗುಮುಚ್ಚಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾರಿಗುಡಿ ಪರಿಸರದಲ್ಲಿ ಹಾದು ಹೋಗುವ ಚರಂಡಿಯಲ್ಲಿ ಪೂರ್ತಿ ಕಸಕಡ್ಡಿ ತುಂಬಿದ್ದು, ಚರಂಡಿಯಲ್ಲಿ ಮಲೀನ ನೀರು ಸಂಗ್ರಹವಾಗಿದೆ. ಚರಂಡಿಯಲ್ಲಿ ಗಿಡಕಟ್ಟಿಗಳು ಬೆಳೆದು ಚರಂಡಿಯ ಸ್ವಚ್ಚತಾ ಕಾರ್ಯವನ್ನು ನಡೆಸದಿರುವುದರಿಂದ ಮಲೀನ ನೀರು ಸರಿಯಾಗಿ ಹರಿದು ಹೋಗದೆ ಅಲಲ್ಲಿ ಶೇಖರಣೆಗೊಂಡು ಈಗ ದುರ್ನಾತ ಬೀರುತ್ತಿದೆ. ಮಾರಿಗುಡಿ ಕಂಪೌಂಡನ ಸುತ್ತಾ ಗಿಡ, ಕಳೆಗಿಡಗಳು ಬೆಳೆದು ನಿಂತಿದೆ.

ಈ ಪರಿಸರ ಈಗ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದ್ದು, ಅಸಹ್ಯಕರ ಸ್ಥಿತಿಯಾಗಿದೆ. ಮಾರಿಗುಡಿಗೆ ಬರುವ ಭಕ್ತರು ಮೂಗಿಗೆ ಕೈ ಹಿಡಿದುಕೊಂಡೇ ಬರಬೇಕಾಗಿದೆ. ಆದ್ದರಿಂದ ನಗರ ಪಂಚಾಯತದ ಅಧಿಕಾರಿಗಳು ಮಾರಿಗುಡಿ ಪರಿಸರಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಮಾರಿಗುಡಿ ಪರಿಸರದ ಸ್ವಚ್ಚತೆಯನ್ನು ಆದ್ಯಷ್ಟು ಶೀಘ್ರ ಮಾಡುವಂತೆ ಭಕ್ತರು ಒತ್ತಾಯಿಸಿದ್ದಾರೆ.












