ವೇಣೂರು: ಇಲ್ಲಿಯ ಬಜಿರೆ ಯುವಶಕ್ತಿ ಸ್ಪೋರ್ಟ್ಸ್ ಕ್ಲಬ್ ಇದರ 19 ನೇ ವರ್ಷದ ಸಂಭ್ರಮಾಚರಣೆಯ ಆಶ್ರಯದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಸೆ.20 ರಂದು ಕ್ರೀಡಾ ಕೂಟ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮನೋಹರ್ ಗೌಡ, ಗೌರವಾಧ್ಯಕ್ಷ ವಿಜಯ ಪೂಜಾರಿ, ಸಾಪಕಧ್ಯಕ್ಷ ರಕ್ಷಿತ್ ಬಜಿರೆ, ಉಪಾಧ್ಯಕ್ಷ ರಂಜಿತ್ ಬಜಿರೆ, ಕೋಶಾಧಿಕಾರಿ ರಾಜೇಶ್ ಬಜಿರೆ, ಕಾರ್ಯದರ್ಶಿ ನಾಗಭೂಷಣ್ ದೇವಾಡಿಗ, ಜೊತೆ ಕಾರ್ಯದರ್ಶೀ ಸುಧೀರ್ ಬಜಿರೆ ಹಾಗೂ ಸದಸ್ಯರು ಉಪಸ್ಥಿತರಿದ್ದರು.












