ವೇಣೂರು; ಪಡ್ಡಂದಡ್ಕ ಜಮಾತಿಗೆ ಒಳಪಟ್ಟ ಎರಡು ಬಡ ಕುಟುಂಬದ ಹೆಣ್ಣು ಮಗಳ ಮದುವೆಗೆ ಸೆ.7 ರಂದು ಜಮಾತ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ, ಯು.ಕೆ .ಮೊಹಮ್ಮದ್ ಹಾಜಿ ನೇತೃತ್ವದಲ್ಲಿ ತಲಾ ರೂ 4 ಲಕ್ಷಗಳು ಮತ್ತು 50 ಸಾವಿರ ವಿತರಿಸಲಾಯಿತು.
ಮಸೀದಿ ಖತೀಬ್ ಬಹುಮಾನ್ಯರಾದ ಸಮೀರ್ ದಾರಿಮಿ ಕಾರ್ಯಕ್ರಮ ಉದ್ಘಾಟನೆ ದುವಾ ಮೂಲಕ ನೆರವೇರಿಸಿದರು. ಪೆರಿಂಜೆ ಮದರಸದ ಅಧ್ಯಾಪಕ ಸಿದ್ದಿಕ್ ಮುಸ್ಲಿಯಾರ್ , ಮಾಜಿ ಅಧ್ಯಾಪಕ ಅಲ್ತಾಪ್ ದಾರಿಮಿ,ಪಡ್ಡಂದಡ್ಕ ಮಸೀದಿ ಸಮಿತಿ ಅಧ್ಯಕ್ಷ ಪುತ್ತುಮೋನು ಗಾಂಧಿನಗರ, ನಿಕಟ ಪೂರ್ವ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ, ಮಾಜಿ ಪ್ರ ಕಾರ್ಯದರ್ಶಿ ರಫೀಕ್ ಪಡ್ಡ, ಮಾಜಿ ಕಾರ್ಯದರ್ಶಿ ಅಬ್ದು ಸಲಾಂ ಶಾಂತಿನಗರ , ಅಶ್ರಫ್ ಶಾಂತಿನಗರ,,ಪ್ರಮುಖರಾದ, ಪತ್ರಕರ್ತ ಮಹಮ್ಮದ್ ಎಚ್ ವೇಣೂರು ,ಎಸ್ ಕೆ ಎಸ್ ಎಸ್ ಎಫ್ ಉಪಾಧ್ಯಕ್ಷ ಹಕೀಮ್ ಗಾಂಧಿನಗರ, ಕಾರ್ಯದರ್ಶಿ ಸ್ವರೂಪ್ ಕಟ್ಟೆಬಳಿ , ಕೋಶಾಧಿಕಾರಿ ಇಕ್ಬಾಲ್ ಕುರ್ಲೊಟ್ಟು ಅಶ್ರಫ್ ಕಿರೋಡಿ, ಯುವ ಉದ್ಯಮಿ ಯು.ಕೆ ಇರ್ಫಾನ್, ಉದ್ಯಮಿ ಮನ್ಸೂರ್ ಮೂಡಬಿದ್ರಿ, ಎಸ್ ಕೆ ರಜಾಕ್, ಯಾಕೂಬು ಪೆರಿಂಜೆ,ಶಬ್ಬೀರ್ ಪಡ್ಡ,ಜೈನುದ್ದೀನ್ ಪೆರಿಂಜೆ ಸೇರಿದಂತೆ ಎಸ್ ಕೆ ಎಸ್ ಎಸ್ ಎಫ್ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಮದರಸ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಮೊಹಮ್ಮದ್ ಶಾಫಿ ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು.












